ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹಾಸನ(Hasan) : ಗಣೇಶ ಮೆರವಣಿಗೆ ಹೋಗುವ ಸಂದರ್ಭದಲ್ಲಿ ವಾಹನವೊಂದು ನುಗ್ಗಿ ಬಾರೀ  ದುರಂತ ಸಂಭವಿಸಿದ‌ ಘಟನೆ ಹಾಸನ(Hasan)  ತಾಲೂಕಿನ ಮೊಸಳೆಹೊಸಹಳ್ಳಿಯಲ್ಲಿ ಸಂಭವಿಸಿದೆ

ಗಣಪತಿ ಮೆರವಣಿಗೆ ಹೋಗುವಾಗ ಜನರ ಮೇಲೆ ಕ್ಯಾಂಟರ್ ವಾಹನ ಹರಿದು ಈ ದುರಂತ ಸಂಭವಿಸಿದೆ. ದುರ್ಘಟಬೆಯಲ್ಲಿ  ಎಂಟು  ಜನರು ಸಾವನ್ನಪ್ಪಿದ್ದಾರೆ. ಇಂದು ರಾತ್ರಿ  ಅದ್ಧೂರಿಯಿಂದ ಗಣೇಶ ಮೆರವಣಿಗೆ (Ganesh Procession) ತೆರಳುತಿತ್ತು. ಈ ವೇಳೆ ಕ್ಯಾಂಟರ್ ವಾಹನವೊಂದು   ಡಿವೈಡರ್​ಗೆ ಡಿಕ್ಕಿ ಹೊಡೆದು   ಇನ್ನೊಂದು ಬದಿಗೆ ಬಂದು‌ ಜನರ ಮೇಲೆ ಹರಿದಿದೆ.  ಪರಿಣಾಮವಾಗಿ  ಮೆರವಣಿಗೆಯಲ್ಲಿದ್ದ ಎಂಟು  ಜನರು ಪ್ರಾಣ ಕಳೆದುಕೊಂಡಿದ್ದಾರೆ.. ಇನ್ನು ಹಲವರಿಗೆ ಗಂಬೀರ ಗಾಯವಾಗಿದೆ. 25ಕ್ಕೂ‌ ಹೆಚ್ಚು ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ವಲಯ ಎಂದು ಗೊತ್ತಿದ್ದರೂ ವಾಹನ ವೇಗವಾಗಿ ಬಂದಿರುವುದೇ  ಈ ದುರಂತಕ್ಕೆ ಕಾರಣ ಎನ್ನಲಾಗಿದ್ದು, ಹಾಸನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನು ಓದಿ : ಅವೈಜ್ಞಾನಿಕ ಡಂಪಿಂಗ್ ಯಾರ್ಡ್ ನಿಂದ ಮಕ್ಕಳಿಗೆ ಉಸಿರುಗಟ್ಟುವ ವಾತಾವರಣ.

ದೇವರ ವಿಷಯಕ್ಕೆ ಜಗಳ, ಮಹಿಳೆಯ ಕೊ ಮಾಡಿದ ಭಾವ.