ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangalore) : ಖ್ಯಾತ ಪರಿಸರ ಹೋರಾಟಗಾರ್ತಿ ಮೇಧಾಪಾಟ್ಕರ್‌(Medha Patkar) ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ನೇತೃತ್ವದಲ್ಲಿ ಕಾಸರಕೋಡ ಬಂದರು(Kasarakodu Port) ವಿರೋಧಿ ಹೋರಾಟ ಪ್ರಮುಖರ ನಿಯೋಗವು  ಮಂಗಳವಾರ ಸಂಜೆ  ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiha) ಅವರನ್ನು  ಕಛೇರಿಯಲ್ಲಿ ಭೇಟಿ ಮಾಡಿದೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ವಿವಾದಿತ ಕಾಸರಕೋಡ  ಟೊಂಕ ವಾಣಿಜ್ಯ ಬಂದರು(Tonka Commercial Port) ನಿರ್ಮಾಣ ಯೋಜನೆಯನ್ನು ಕೈಬಿಡಲು ಮತ್ತು ಅಲ್ಲಿನ ಮೀನುಗಾರರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಒತ್ತಾಯ ಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಸ್ವತಂತ್ರ ತನಿಖಾ ಸಮಿತಿಯ ವರದಿಯ ಶಿಫಾರಸು ಸಹಿತ  ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಿ ಮುಖ್ಯಮಂತ್ರಿಗಳ ಮಧ್ಯಪ್ರವೇಶಕ್ಕೆ ವಿನಂತಿಸಿದರು. ನಂತರ ಮುಖ್ಯಕಾರ್ಯದರ್ಶಿಗಳನ್ನು ಭೇಟಿ ಮಾಡಿ ತಮ್ಮ ಅಹವಾಲನ್ನು ದಾಖಲಿಸಿದ್ದಾರೆ.

ಹೊನ್ನಾವರವು ಶರಾವತಿ ನದಿ(Honnavar Sharavati River) ಮತ್ತು ಅರಬ್ಬಿ ಸಮುದ್ರದ(Ocean Sea) ನಡುವೆ ಇದ್ದು, ಆಲಿವ್ ರಿಡ್ಲೆ(Alive Ridle) ಆಮೆಗಳಂತಹ ಅಪರೂಪದ ಜೀವಿಗಳ ನಿವಾಸ ಸ್ಥಾನವಾಗಿದೆ. ಇಲ್ಲಿನ ಜನರ ಬದುಕು ಸಾಂಪ್ರದಾಯಿಕ ಮೀನುಗಾರಿಕೆ(Traditional Fishing) ಆರ್ಥಿಕತೆಯನ್ನು ಅವಲಂಭಿಸಿದೆ. 2010ರಲ್ಲಿ ಹೊನ್ನಾವರ ಪೋರ್ಟ್‌ ಪ್ರೈವೇಟ್ ಲಿಮಿಟೆಡ್ (HPPL) ಕಂಪನಿಗೆ ವಾಣಿಜ್ಯ ಬಂದರು ನಿರ್ಮಿಸಲು ಅನುಮತಿ ನೀಡಿದಾಗಿನಿಂದ ಈ ಪ್ರದೇಶದಲ್ಲಿ ಆತಂಕ ಮತ್ತು ವಿರೋಧ ಹೆಚ್ಚಿದೆ. ಈ ಯೋಜನೆಯು ಐದು ಮೀನುಗಾರಿಕೆ ಗ್ರಾಮಗಳಿಗೆ ಸೇರಿದ 44 ಹೆಕ್ಟೇರ್ ಭೂಮಿಯಲ್ಲಿ ಸಮುದಾಯದ ಒಪ್ಪಿಗೆ ಇಲ್ಲದೆ ಮತ್ತು ಸಂವಿಧಾನಾತ್ಮಕ ಪರಿಸರ ನಿಯಮಗಳನ್ನು ಉಲ್ಲಂಘಿಸಿ ಕೈಗೊಳ್ಳಲಾಗಿದೆ ಎಂದು ಸಿಎಂ ಗಮನಕ್ಕೆ ತಂದರು.

2025 ರಲ್ಲಿ ನಡೆದ ಭೂ ಮಾಪನ ಮತ್ತು ರಸ್ತೆ ನಿರ್ಮಾಣದಂತಹ ಬಲವಂತದ ಹೊಸ ಬೆಳವಣಿಗೆಗಳು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿವೆ. ಸಾಗರ್‌ ಮಾಲಾ ಯೋಜನೆಯಡಿಯಲ್ಲಿ(Sagaramal Project) ಬಂದರಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಿರ್ಮಿಸಲಾಗುತ್ತಿದ್ದು, ಇದು ಮೀನುಗಾರರ ಪರಂಪರಾಗತ ವಸತಿನೆಲೆಯ CRZ-I ಮತ್ತು CRZ-III ಪ್ರದೇಶಗಳಲ್ಲಿ ಹಾದುಹೋಗುತ್ತದೆ. ಈ ರಸ್ತೆಯು ಮೀನು ಒಣಗಿಸುವ ಸ್ಥಳಗಳು ಮತ್ತು ಮೀನುಗಾರರ ಮನೆಗಳಂತಹ ಸಾಮೂಹಿಕ ಸ್ಥಳಗಳನ್ನು ಕಡಿತಗೊಳಿಸುತ್ತದೆ.

ಫೆಬ್ರವರಿ 25, 2025 ರಂದು ನಡೆದ ಶಾಂತಿಯುತ ಪ್ರತಿಭಟನೆಗೆ ಪೊಲೀಸರು ಲಾಠಿ ಪ್ರಹಾರ, ಬಂಧನ ಮತ್ತು ಪ್ರತಿಭಟನಾಕಾರರ ವಿರುದ್ಧ “ದಂಗೆ ಮತ್ತು ಕೊಲೆ” ಯತ್ನದಂತಹ ಗಂಭೀರವಾದ ಸುಳ್ಳು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ಶಾಂತಿಯುತ ಹೋರಾಟವನ್ನು ಹತ್ತಿಕ್ಕುವ ಕೆಲಸ ಸ್ಥಳೀಯ ಪೊಲೀಸ್ ಇಲಾಖೆಯಿಂದ ಆಗಿದೆ. ಮಾಧ್ಯಮಗಳಿಗೆ ಹೇಳಿಕೆ ನೀಡಿದ ಕಾರಣಕ್ಕೆ 15 ವರ್ಷದ ಬಾಲಕಿ ಅಪೇಕ್ಷಾಳ ಕುಟುಂಬ ಸದಸ್ಯರ ಮೇಲೆ ದೈಹಿಕ ಹಲ್ಲೆ ನಡೆಸಿ ಬಂಧಿಸಲಾಗಿದೆ. ರೇಖಾ ತಾಂಡೇಲ ಎಂಬ ಮಹಿಳೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಳೆ. ಇದರ ನಡುವೆ ಸುಮಾರು 40 ಜನರು ಪ್ರತಿಭಟನೆಯ ಸಂಕೇತವಾಗಿ ಸಮುದ್ರದೊಳಗೆ ನಡೆದು ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿದೆ.

ಮೀನು ಒಣಗಿಸುವ ಪ್ರದೇಶಗಳಿಗೆ ಪ್ರವೇಶ ಕಳೆದುಕೊಂಡಿರುವುದರಿಂದ ಮಹಿಳೆಯರಿಗೆ ಉದ್ಯೋಗ ನಷ್ಟವಾಗಿದ್ದು, ಕುಟುಂಬಗಳ ಆದಾಯ ಕುಸಿದಿದೆ. ಮೀನುಗಾರಿಕಾ ಆರ್ಥಿಕ ತಜ್ಞರ ಪ್ರಕಾರ, ಬಂದರು ನಿರ್ಮಾಣವು ನದಿ-ಸಮುದ್ರ ಸಂಧಿಯ ಪರಿಸರ ವ್ಯವಸ್ಥೆಯನ್ನು ಹಾಳುಮಾಡಿ, ಕರಾವಳಿ ಸವೆತವನ್ನು ಹೆಚ್ಚಿಸಿ ಸ್ಥಳೀಯ ವಾಸಸ್ಥಳಗಳಿಗೆ ಅಪಾಯವನ್ನುಂಟುಮಾಡುತ್ತದೆ. ಖಾಸಗಿ ಲಾಭ ಮತ್ತು ಸರ್ಕಾರದ ಪಾತ್ರದಿಂದಾಗಿ, ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಸಂರಕ್ಷಣಾ ಕ್ರಮಗಳು ಮತ್ತು ಸಮುದಾಯದ ಹಕ್ಕುಗಳನ್ನು ಧ್ವಂಸಗೊಳಿಸಲಾಗುತ್ತಿದೆ ಎಂಬ ತನಿಖಾ ವರದಿಯ ಅಂಶಗಳ ಮೂಲಕ ಮೇಧಾ ಪಾಟ್ಕರ್(Medha Patkar) ಅವರು ಮುಖ್ಯಮಂತ್ರಿಗಳ ಗಮನಸೆಳೆದಿದ್ದಾರೆ.

ನಿಯೋಗದಲ್ಲಿ ಬಂದರು ವಿರೋದಿ ಹೋರಾಟ ಸಮಿತಿ(Port Oppose Struggle Committee) ಅಧ್ಯಕ್ಷ ರಾಜೇಶ ಗೋವಿಂದ ತಾಂಡೇಲ, ಮಹ್ಮದ್ ಕೋಯಾ, ರಿಯಾನಾ ಶೇಖ್, ನ್ಯಾಯವಾದಿ ಸಂಪ್ರೀತಾ ಮತ್ತು ಇತರ ಪ್ರಮುಖರು ಇದ್ದರು.
ಇದನ್ನು ಓದಿ : ಅರಬ್ಬಿ ಸಮುದ್ರದಲ್ಲಿ ಮತ್ಸ್ಯ ವೈಭವ

ದಾಂಡೇಲಿಯಲ್ಲಿ ಸ್ಕೂಟಿಗೆ ಟ್ರಾಕ್ಟರ್ ಢಿಕ್ಕಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಗೆ ಗಂಭೀರ ಗಾಯ.

ಮುರ್ಡೇಶ್ವರದಲ್ಲಿ ಮಂಗಳಮುಖಿಯರಿಂದ ದರೋಡೆ : ನಾಲ್ವರ ಬಂಧನ

ಸಾರ್ವಜನಿಕರಿಗೆ ತಲೆ ನೋವಾಗಿದ್ದ ವ್ಯಕ್ತಿ ಗಡಿಪಾರು.