ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಉಡುಪಿ(Udupi) :  ರೈಲು ಡಿಕ್ಕಿಗೆ ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡ ಘಟನೆ  ಬೈಂದೂರಿನ ಬಿಜೂರು ಸಾಲಿಮಕ್ಕಿ ರೈಲ್ವೆ ಗೇಟ್ ಬಳಿ ಶನಿವಾರ ಸಂಭವಿಸಿದೆ.

ಗಾಯಗೊಂಡ ವ್ಯಕ್ತಿಯನ್ನು ನೆಲ್ಯಾಡಿಯ ನಿವಾಸಿ ನಾಗರಾಜ್ ಶೆಟ್ಟಿ ಎಂದು ಗುರುತಿಸಲಾಗಿದೆ. ಕಾರವಾರದಿಂದ ಬೆಂಗಳೂರು ಕಡೆ  ತೆರಳುತ್ತಿದ್ದ ರೈಲು  ಡಿಕ್ಕಿಯಾಗಿದೆ. ತೀವ್ರವಾಗಿ ಗಾಯಗೊಂಡ ನಾಗರಾಜ್ ಅವರನ್ನು ತಕ್ಷಣವೇ ಮಣಿಪಾಲ್‌ನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಅಧಿಕಾರಿಗಳ ಪ್ರಕಾರ ಅವರ ಸ್ಥಿತಿ ಗಂಭೀರವಾಗಿದೆ.  ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು  ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ : ಮನೆ ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಕಳ್ಳನ ಬಂಧನ.

ಭಟ್ಕಳದಲ್ಲಿ ಮಂಗಳೂರಿನ ವ್ಯಕ್ತಿ ಬಂಧನ. ನಕಲಿ‌ ನೋಟು ವಶಕ್ಕೆ