ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಚೆನ್ನೈ(Chennai) : ಆಸ್ಪತ್ರೆಯಲ್ಲಿ ರೌಂಡ್ಸ್ ನಲ್ಲಿದ್ದ ಹೃದ್ರೋಗ ತಜ್ಞರೊಬ್ಬರು   ಹೃದಯ ಸ್ತಂಭನದಿಂದ(Heart Attack) ನಿಧನರಾದ  ಘಟನೆ ಚೆನ್ನೈನಲ್ಲಿ ನಡೆದಿದೆ.

ಗ್ರಾಡ್ಲಿನ್ ರಾಯ್ (39) ಅವರು ಹೃದಯಘಾತಕ್ಕೆ ಒಳಗಾದ  ಶಸ್ತ್ರಚಿಕಿತ್ಸಕರೆಂದು ತಿಳಿದುಬಂದಿದೆ. ಎಳೆಯ ಪ್ರಾಯದ ವೈದ್ಯನ ದುರಂತ ಸಾವು(Tragedy Death) ವೈದ್ಯಕೀಯ ಲೋಕಕ್ಕೆ  ಅಘಾತವನ್ನು ಉಂಟುಮಾಡಿದೆ.

ಡಾ. ಗ್ರಾಡ್ಲಿನ್ ರಾಯ್ ಅವರು ಆಸ್ಪತ್ರೆಯಲ್ಲಿ ವಾರ್ಡ್‌ನಲ್ಲಿ ರೌಂಡ್ಸ್ ಹಾಕುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ತಕ್ಷಣ ಅವರನ್ನು ಸಹೋದ್ಯೋಗಿಗಳು ಪರೀಕ್ಷೆಗೆ ಒಳಪಡಿಸಿದರು. ಸಿಪಿಆ‌ರ್ ಮಾಡಿದರು. ಆಂಜಿಯೋಪ್ಲಾಸ್ಟಿ ಕೂಡ ಮಾಡಲಾಯಿತು. ಇಂಟ್ರಾ-ಆರ್ಟಿಕ್ ಬಲೂನ್ ಪಂಪ್, ಇಸಿಎಂಒ ಸಹ ಮಾಡಲಾಯಿತು. ಆದರೆ, 100% ಎಡ ಮೇನ್ ಆರ್ಟರಿ ಅಡಚಣೆಯಿಂದಾಗಿ ಹೃದಯ ಸ್ತಂಭನ ಆಗಿದೆ. ಎಷ್ಟೇ ಪ್ರಯತ್ನ ಪಟ್ಟರೂ ವೈದ್ಯರನ್ನು ಬಚಾವ್ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಸಹೋದ್ಯೋಗಿಯ ನಿಧನಕ್ಕೆ ಆಸ್ಪತ್ರೆಯ ಹಿರಿ ಕಿರಿಯ ವೈದ್ಯರು  ಸಂತಾಪ(Tribute) ಸೂಚಿಸಿದ್ದಾರೆ. ದೀರ್ಘ-ಅನಿಯಮಿತ ಕೆಲಸದ ಸಮಯ, ಅನಾರೋಗ್ಯಕರ ಆಹಾರ ಪದ್ಧತಿ(Food styke), ಜಡ ಜೀವನಶೈಲಿ(Life Style), ಮಾನಸಿಕ ಹೊರೆ, ಅಧಿಕ ಒತ್ತಡ(Tress), ಧೂಮಪಾನ(Smoking) ಮತ್ತು ಮದ್ಯಪಾನವು ವೈದ್ಯಕೀಯ ವೃತ್ತಿಪರರಿಗೆ ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ಡಾ. ಕುಮಾರ್ ಅವರು ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.

ವೈದ್ಯರು ಹೃದಯ ಆರೋಗ್ಯಕ್ಕೆ ಪೂರಕವಾಗಿ ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಇತರರ ಹೃದಯಗಳನ್ನು ಉಳಿಸಲು ತಮ್ಮ ಜೀವನವನ್ನು ಮುಡಿಪಾಗಿಡುವವರು ಹೆಚ್ಚಾಗಿ ತಮ್ಮದೇ ಆದ ಹೃದಯಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಕುಮಾ‌ರ್ ಖೇದ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ಗಂಟಲಿಗೆ ಅನ್ನದ ಅಗುಳು ಸಿಲುಕಿ ಯುವಕ ಸಾವು. ಕಾರವಾರದ ಬಿಣಗಾದಲ್ಲಿ ಘಟನೆ

ಬಡ ಮೀನುಗಾರನ ಲಕ್ ಬದಲಿಸಿದ ಸಚಿನ್ ತೆಂಡೂಲ್ಕರ್.