ದಾಂಡೇಲಿ :ಇಂದು  ಬೆಳ್ಳಂಬೆಳಗ್ಗೆ  ಮನೆಯ ಬಾಗಿಲ ಮುಂಭಾಗವೇ ಮೊಸಳೆಯೊಂದು ಪ್ರತ್ಯಕ್ಷವಾದ ಘಟನೆ
ನಗರದ ಅಂಬೆವಾಡಿಯಲ್ಲಿ ನಡೆದಿದೆ.

ಇಂಡಿಯನ್ ಗ್ಯಾಸ್ ಕಾರ್ಯಾಲಯದ ಮುಂಭಾಗದಲ್ಲಿರುವ ಅರುಣಾದ್ರಿ ರಾವ್ ಅವರ ಮನೆ ಎದುರು ಮೊಸಳೆ ಪ್ರತ್ಯಕ್ಷವಾಗಿದೆ. ರಾವ್ ಅವರು ಮನೆಯ ಬಾಗಿಲು ತೆರೆಯುತ್ತಿದ್ದಂತೆಯೇ ಮೊಸಳೆ ಪ್ರತ್ಯಕ್ಷವಾಗಿರುವುದನ್ನು ಗಮನಿಸಿದ್ದಾರೆ. ಮೊಸಳೆ ಬಂದಿರುವ ಸುದ್ದಿ  ಹಬ್ಬಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು.

ತಕ್ಷಣವೇ  ರಾವ್ ಅವರು ಉರಗ ಪ್ರೇಮಿ ರಜಾಕ್ ಶಾ ಅವರಿಗೆ ಮಾಹಿತಿಯನ್ನು ನೀಡಿದ್ದಾರೆ. ರಜಾಕ್ ಶಾ  ಅವರು ಕೂಡಲೇ ತನ್ನ ಸಂಗಡಿಗರನ್ನು ಕಳುಹಿಸಿ ಸ್ಥಳೀಯರ ಸಹಕಾರದಲ್ಲಿ ಮೊಸಳೆಯನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಮೊಸಳೆ ಬಂದಿರುವ ಸುದ್ದಿ ತಿಳಿದು  ಜನರಲ್ಲಿ ಭಯ ಅವರಿಸಿದೆ.  ಮೊಸಳೆ ಹೇಗೆ ಬಂತು ಎನ್ನುವ ಬಗ್ಗೆ  ಚರ್ಚೆ ನಡೆದಿದೆ.