ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಗೋಕರ್ಣ(Gokarn) : ಪುರಾಣ ಪ್ರಸಿದ್ಧ ಗೋಕರ್ಣದ ಶ್ರೀ ಮಹಾಬಲೇಶ್ವರ(Mahabaleshwar) ಮತ್ತು ಶ್ರೀ ಮಹಾಗಣಪತಿಯ(Mahaganapati) ಸನ್ನಿಧಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಸಂಸ್ಕಾರದ ಅನಾವರಣವಾಗಿದೆ. ಭಕ್ತರ ಮುಂದೆ ಗೋಕರ್ಣ ಠಾಣೆಯ ಪಿಎಸ್ಐ ತಮ್ಮ ಇಲಾಖೆಯ ಹೆಡ್ ಕಾನ್ಸ್ಟೇಬಲ್ ಒಬ್ಬರಿಗೆ ಕಪಾಳ ಮೋಕ್ಷ(Slapped) ಮಾಡಿ ರೋಷಾವೇಷ ಪ್ರದರ್ಶಿಸಿದ್ದಾರೆ.
ಬುಧವಾರ ಶಿವರಾತ್ರಿಯ(Shivaratri) ದಿನ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಗೋಕರ್ಣಕ್ಕೆ(Gokarn) ಆಗಮಿಸಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮಾತ್ರ ವಿವಿಐಪಿ ವ್ಯವಸ್ಧೆಯಲ್ಲಿ (VVIP System) ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ಹಿಂದಿನಿಂದ ನಡೆದುಕೊಂಡು ಬಂದಂತೆ ಗೋಕರ್ಣ ಸುತ್ತಮುತ್ತಲ ಭಕ್ತರಿಗೆ ಪ್ರತ್ಯೇಕವಾಗಿ ದೇವಾಲಯದೊಳಗೆ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿತ್ತು. ಹೀಗೆ ದೇವರ ದರ್ಶನಕ್ಕೆ ಬಂದಿದ್ದ ಹೆಡ್ ಕಾನಸ್ಟೇಬಲ್ ಕುಟುಂಬವೊಂದು ಅವಮಾನ ಎದುರಿಸಿದೆ. ಮೂಲತಃ ಗೋಕರ್ಣ ಮೂಲದವರೇ(Gokarn Native) ಆಗಿರುವ ಕುಟುಂಬಕ್ಕೆ ಪಿಎಸ್ಐ ಖಾದರ ಬಾಷಾ(PSI Khader Basha) ಅವರು ದೇವಾಲಯದ ಆವರಣದಲ್ಲೇ ಕಪಾಳ ಮೋಕ್ಷ(Slapped) ಮಾಡಿದ್ದಾರೆ.
ಜೈರಾಮ್ ಹೊಸ್ಕಟ್ಟಾ ಅವರು ಭಟ್ಕಳ ನಗರ ಪೊಲೀಸ್ ಠಾಣೆಯ (Bhatkal Town Police Station) ಹೆಡ್ ಕಾನ್ಸ್ಟೇಬಲ್ ಆಗಿದ್ದಾರೆ. ಜೈರಾಮ್ ಅವರು ತಮ್ಮ ಕುಟುಂಬದ ಸಹಿತ ಪ್ರತಿ ವರ್ಷದಂತೆ ಈ ಬಾರಿಯೂ ಮಹಾಬಲೇಶ್ವರನ ದರ್ಶನಕ್ಕೆ ಬಂದಿದ್ದರು. ದೇವರ ದರ್ಶನಕ್ಕೆ ಬಂದಿದ್ದ ಅವರು ತಾವೂ ಪೊಲೀಸ್ ಇಲಾಖೆ(Police Department) ಅಂತಾ ಹೇಳಿಕೊಳ್ಳದೆ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ದರ್ಶನಕ್ಕಾಗಿ ಕಾಯುತ್ತಿದ್ದರು. ಈ ಮಧ್ಯೆ ಸಾಲಿನಲ್ಲಿದ್ದ ಭಕ್ತರು ಕರ್ತವ್ಯದಲ್ಲಿದ್ದ ಮಹಿಳಾ ಕಾನ್ಸ್ಟೇಬಲ್ಗೆ ಬೇಗ ಬೇಗ ಮುಂದೆ ಬಿಡಿ ಎಂದು ಹೇಳಿದ್ದರೆನ್ನಲಾಗಿದೆ. ಇದಕ್ಕೆ ಕೋಪಗೊಂಡ ಮಹಿಳಾ ಸಿಬ್ಬಂದಿ ಭಕ್ತರೊಂದಿಗೆ ಜಗಳಕ್ಕೆ ಇಳಿದಿದ್ದಾರೆನ್ನಲಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಇನ್ನೂ ಗಲಾಟೆ ಆಗತ್ತಿದ್ದಂತೆ ಮಹಿಳಾ ಸಿಬ್ಬಂದಿ ಪಿಎಸ್ಐ ಖಾದರ್ ಬಾಷ್ ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಆಗ ಸ್ಥಳಕ್ಕೆ ಬಂದ ಪಿಎಸ್ಐ ಖಾದರ್ ಬಾಷ್ ಘಟನೆ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಹೆಡ್ ಕಾನ್ಸ್ಟೇಬಲ್ ಜೈರಾಮ್ ಹೊಸ್ಕಟ್ಟಾ ಅವರಿಗೆ ಸಾರ್ವಜನಿಕರ ಎದುರೆ ಅವಾಚ್ಯ ಪದಗಳಲ್ಲಿ ನಿಂದಿಸಿ ಕಪಾಳ ಮೋಕ್ಷ ಮಾಡಿದ್ದಾರೆ. ಅಲ್ಲದೇ ಕ್ಯೂನಲ್ಲಿ ನಿಂತಿದ್ದ ಓರ್ವ ಹೆಡ್ ಕಾನ್ಸ್ಟೇಬಲ್ ಅವರನ್ನು ಹೊರಗೆ ಎಳೆದು ಹಾಕಿದ್ದಾರೆ. ತಾನು ಏನು ಜಗಳ ಮಾಡಿಲ್ಲ ಅಂದರೂ ಎಷ್ಟೇ ಹೇಳಿದರೂ ಕೇಳುವ ಪರಿಸ್ಥಿತಿಯಲ್ಲಿ ಪಿಎಸ್ಐ ಖಾದರ್ ಇರಲಿಲ್ಲ . ಅವರ ಪತ್ನಿ ಮಾತಿಗೂ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ.
ಗೋಕರ್ಣದಲ್ಲಿ ಪಿಎಸ್ಐ(Gokarn PSI) ಅವರು ಸಾರ್ವಜನಿಕವಾಗಿ ತಮ್ಮ ಇಲಾಖೆಯ ಹೆಡ್ ಕಾನ್ಸ್ಟೇಬಲ್ಗೆ ಕಪಾಳ ಮೋಕ್ಷ ಮಾಡಿರುವ ವಿಚಾರ ಚರ್ಚೆ ಆಗುತ್ತಿದೆ. ಶಾಂತಿ ಸುವ್ಯವಸ್ಥೆಯನ್ನ ಕಾಪಾಡಬೇಕಾದ ಪೊಲೀಸ್ ಅಧಿಕಾರಿಗಳು ಈ ರೀತಿಯಾಗಿ ಸಾರ್ವಜನಿಕರ ಎದುರು ಕೂಗಾಡುತ್ತಿರುವ ದೃಶ್ಯ ಜನ ಸ್ನೇಹಿ(Janasnehi) ವ್ಯವಸ್ಥೆಯ ಬಗ್ಗೆ ಪ್ರಶ್ನಿಸುವಂತೆ ಮಾಡಿದೆ.
ಶಾಂತಿ ಸುವ್ಯವಸ್ಥೆಯ ಯಶಸ್ವಿಗೆ ಬೆನ್ನು ತಟ್ಟಿಕೊಳ್ಳುವ ಹಿರಿಯ ಅಧಿಕಾರಿಗಳು ಈ ಬಗ್ಗೆ ಯಾವ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆಂದು ಸಾರ್ವಜನಿಕರು ಕಾದು ನೋಡುತ್ತಿದ್ದಾರೆ.
ಇದನ್ನು ಓದಿ : ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗುಜರಿ ಗೋಡೌನ್ ಗೆ ಬೆಂಕಿ. ಸಂಚಾರ ವ್ಯತ್ಯಯ.
ಅನ್ಯ ಜಾತಿ ವಿವಾಹದಿಂದ ಸಿಟ್ಟಾದ ತಂದೆ. ಇಬ್ಬರಿಗೂ ಚಾಕು ಇರಿದ. ತಾನು ವಿಷ ಸೇವಿಸಿದ.
ಪವಿತ್ರ ಜಲದಿಂದ ಶಿವನಿಗೆ ಅಭಿಷೇಕ ಮಾಡಿದ ಸಚಿವ ಮಾಂಕಾಳ್ ವೈದ್ಯ. ರಾತ್ರಿ ಪೂರ್ತಿ ಜಾಗರಣೆ.
ವಧುವಿನ ಸ್ನೇಹಿತಗೆ ಹಾರ ಹಾಕಿದ ವರ. ಕೆನ್ನೆಗೆ ಬಾರಿಸಿ ಹೊರ ನಡೆದ ವಧು.