ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)  ಶಿರಸಿ(Sirsi) : ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿ ಸಾಮಾಜಿಕ ನ್ಯಾಯದ ಪ್ರತಿಪಾದಕರಾದ ದಿವಂಗತ ನಾಯಕರಾದ ದಿ. ಬಂಗಾರಪ್ಪನವರ 93 ನೇ ಹುಟ್ಟು ಹಬ್ಬವು ಜಿಲ್ಲಾದ್ಯಂತ ಅವರ ಸಾಧನೆಯ ಕಾರ್ಯ ಸಂಭ್ರಮಿಸುವ ದಿನಗಳಾಗಿವೆ ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಹೇಳಿದರು.

ಇಂದು ದಿವಂಗತ ಬಂಗಾರಪ್ಪನವರ 93 ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ಸಾಮಾಜಿಕ ಕಳಕಳಿ, ಭೂಮಿ ಹೋರಾಟ ಮತ್ತು ಸಾಮಾಜಿಕ ನ್ಯಾಯದ ಕಾರ್ಯವನ್ನು  ನೆನಪಿಸಿದರು. ಅವರ ಹುಟ್ಟು ಹಬ್ಬದ ದಿನದಂದು ಅವರ ಸಾಧನೆಯನ್ನು ಈ ಸಂದರ್ಭದಲ್ಲಿ ರವೀಂದ್ರ ಸ್ಮರಿಸಿದರು.

ಮುಖ್ಯಮಂತ್ರಿ ಇರುವಾಗ ಕಾರವಾರಕ್ಕೆ ಬಂದ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಚೆನ್ನಪ್ಪ ರೆಡ್ಡಿ ಆಯೋಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಿಂದುಳಿದ ಮೀಸಲಾತಿ ಪಟ್ಟಿಯಿಂದ ತಪ್ಪಿರುವ ಪಡ್ತಿ, ಗುನಗಿ, ಕೋಮಾರಪಂತ, ಕುಳವಾಡಿ ಮರಾಠಿ, ಶೇರುಗಾರ ಜಾತಿಗಳಿಗೆ ಮೀಸಲಾತಿ ವಂಚಿತವಾಗಿರುವುದನ್ನು ಅವರ ಗಮನಕ್ಕೆ ತಂದಾಗ, ತಕ್ಷಣ ಜಿಲ್ಲೆಯಿಂದ ಮೀಸಲಾತಿ ವಂಚಿತ ಜಾತಿಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟಿರುವ ಕಾರ್ಯ ವಿಶೇಷವೆಂದು ಅವರು ನೆನಪಿಸಿದರು.

ಉತ್ತರಕನ್ನಡ ಜಿಲ್ಲೆಯ ಗುಡ್ಡಗಾಡು ಬುಡಕಟ್ಟು ಜನಾಂಗಗಳಾದ ಹಾಲಕ್ಕಿ, ಕುಣಬಿ, ಗೌಳಿ ಮುಂತಾದ ಸಮಾಜವನ್ನ ಬುಡಕಟ್ಟು ಪಂಗಡಕ್ಕೆ ಸೇರಿಸುವುದಕ್ಕೆ ಪ್ರತಿಪಾಧನೆ ಮಾಡಿರುವುದು ಗಮನಾರ್ಹ ಅಂಶ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಅರಣ್ಯ ಪ್ರದೇಶದಲ್ಲಿ ಆಶ್ರಯ ಪಟ್ಟ : ತಲಾ ತಲಾಂತರದಿಂದ ಅರಣ್ಯ ಪ್ರದೇಶದಲ್ಲಿ ವಾಸ್ತವ್ಯ ಮಾಡಿಕೊಂಡ ಅರಣ್ಯವಾಸಿಗಳ ವಾಸ್ತವ್ಯಕ್ಕಾಗಿ ಮನೆಗಾಗಿ ಆಶ್ರಯ ಪಟ್ಟ ನೀಡಿರುವುದು ಅವರ ರಾಜಕೀಯ ಹಿತಾಸಕ್ತಿಗೆ ಪೂರಕವಾಗಿದೆ. ಎಂದು ಹೇಳುತ್ತಾ ಅರಣ್ಯವಾಸಿಗಳ ಪರವಾದ ದಿವಂಗತ ಬಂಗಾರಪ್ಪ ಅವರ ಕಾರ್ಯವನ್ನ ಶ್ಲಾಘಿಸಿದರು. ಅವರು ನೀಡಿದಂತ ಅರಣ್ಯ ಪ್ರದೇಶದ ಆಶ್ರಯ ಪಟ್ಟಕ್ಕೆ ತದನಂತರದ ರಾಜಕೀಯ ವ್ಯವಸ್ಥೆಯು ಇಂದಿನವರೆಗೂ ಕೇಂದ್ರ ಸರ್ಕಾರದ ಅನುಮತಿ ನೀಡದಿರುವುದು ವಿಷಾಧಕರವೆಂದು ಈ ಸಂದರ್ಭದಲ್ಲಿ ರವೀಂದ್ರ ನಾಯ್ಕ ಪ್ರತಿಪಾದಿಸಿದರು.

ಇದನ್ನು ಓದಿ : ಮಣ್ಕುಳಿಯಿಂದ ಸ್ಯಾಂಡಲ್‌ವುಡ್‌ಗೆ ಯುವ ಪ್ರತಿಭೆ‌ ಜಯ್ ಡಿ. ಭಟ್ಕಳ. ಅಕ್ಟೋಬರ್ 31ಕ್ಕೆ ಪ್ಯಾನ್ ಇಂಡಿಯಾ ಸಿನೇಮಾ.

ಬೈಕ್ ನಲ್ಲಿ ಪಟಾಕಿ‌ ಸಿಡಿಸಿ ಸ್ಟಂಟ್. ಕಾರವಾರ ಟ್ರಾಫಿಕ್ ಪೊಲೀಸರಿಂದ ಯುವಕರಿಬ್ಬರು ವಶಕ್ಕೆ.

ಅಮೇರಿಕನ್ ಕರೆನ್ಸಿ ಸಾಗಾಟ. ಭಟ್ಕಳ ವ್ಯಕ್ತಿ ಬಂಧನ