ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar) : ಸ್ಟಾರ್ ಚಾಯ್ಸ್ ನೃತ್ಯ ಕಲಾ ಕೇಂದ್ರ, ಜಿಲ್ಲಾ ಸರ್ಕಾರಿ ನೌಕರರ ಸಂಘ ಮತ್ತು ಜಿನೆಟಿಕ್ ಸ್ಮಾರ್ಟ್ ಸೊಲ್ಯೂಷನ್ ಸಂಯುಕ್ತಶ್ರಯದಲ್ಲಿ 12 ನೇ ವರ್ಷದ ಚಿಣ್ಣರ ಹೆಜ್ಜೆ (Chinnara Hejje) ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಬಂದರು ಇಲಾಖೆಯ ಅಧಿಕಾರಿ ಸುರೇಶ ಶೆಟ್ಟಿ ಚಿಣ್ಣರ ಹೆಜ್ಜೆ ಶಿಬಿರವನ್ನ ದೀಪ ಬೆಳಗಿಸಿ ಗಿಡಕ್ಕೆ ನೀರೇರೆದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೇಸಿಗೆ ಶಿಬಿರವು ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿದ್ದು  ಮಕ್ಕಳ ಪ್ರತಿಭೆಯನ್ನ ತೊರ್ಪಡಿಸಲು ಸಹಾಯವಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ನಗರಸಭೆ ಸದಸ್ಯ ರೋಶನಿ ಮಾಳ್ಸೆಕರ್ ಉಪಸ್ಥಿತರಿದ್ದು ಮಾತನಾಡಿದರು. ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಂಜೀವಕುಮಾರ್ ಸ್ಟಾರ್ ಚಾಯ್ಸ್ ಕಲಾ ಕೇಂದ್ರದ ಬೆಳವಣಿಗೆ ಮತ್ತು ರಾಜನ್ ಬಾನಾವಳಿಕರ್ ಅವರ ಶ್ರಮವನ್ನ ಕೊಂಡಾಡಿದರು. ಅತಿಥಿಗಳಾಗಿ ಪ್ರೀಮಿಯರ್ ಕಾಲೇಜು ಪ್ರಾಂಶುಪಾಲ ದೀಪಕ್ ಬೊಮ್ಕರ್ ಉಪಸ್ಥಿತರಿದ್ದರು

ಸಂಸ್ಥೆಯ ಮಾಜಿ ಗೌರವಾಧ್ಯಕ್ಷರಾದ ಗಿರೀಶ್ ರಾವ್ ಅವರು ಮಾತನಾಡಿದರು. ವೇದಿಕೆಯಲ್ಲಿ ಸ್ಟಾರ್ ಚಾಯ್ಸ್(Star Choice) ಕೇಂದ್ರದ ಗೌರವಾಧ್ಯಕ್ಷ ಪ್ರಕಾಶ್ ನಾಯ್ಕ, ಯೋಗ ಶಿಕ್ಷಕ ಪ್ರಶಾಂತ್ ರೇವಣಕರ್, ಸ್ಟಾರ್ ಚಾಯ್ಸ್ ನೃತ್ಯ ಕಲಾ ಕೇಂದ್ರದ ಸಂಸ್ಥಾಪಕ ರಾಜನ್ ಬಾನಾವಳಿಕರ್, ಅಧ್ಯಕ್ಷ  ರೋಹಿದಾಸ್ ಬಾನಾವಳಿಕರ, ಸಂಗೀತ ಶಿಕ್ಷಕ ಸಂಜು ಚೆಂಡೇಕರ್, ಭರತನಾಟ್ಯ ಶಿಕ್ಷಕಿ ಅಮೃತ ನಾಯ್ಕ,  ಕೇಂದ್ರದ ಸುನೀಲ್ ತಾಮ್ಸೆ,  ಜ್ಯೋತಿ ನಾಯ್ಕ, ಸಂಗೀತ ನಾಯ್ಕ, ಮಹೇಂದ್ರ ಬಾನಾವಳಿ ಮುಂತಾದವರು ಉಪಸ್ಥಿತರಿದ್ದರು.

ತ್ರಿವೇಣಿ ಸರ್ವರನ್ನ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು.ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯ ಮಕ್ಕಳು ಮತ್ತು ಪಾಲಕರು ಹಾಜರಿದ್ದರು.

ಇದನ್ನು ಓದಿ : ಕಾಳಿ ಹಳೆ ಸೇತುವೆ ತೆರವುಗೊಳಿಸುವ ವೇಳೆ ಘಟನೆ.

ಪಾಪ ಮೊನಾಲಿಸಾ. ಆಫರ್ ನೀಡಿದ್ದ ನಿರ್ದೇಶಕ ಆರೆಸ್ಟ್.

ರೌಡಿಶೀಟರ್ ನ ಬಂಧಿಸಿ, ಜೈಲಿಗಟ್ಟಿದ ಪೊಲೀಸರು.