ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ಗ್ಯಾಸ್ ಸಿಲಿಂಡರ್ ರಿಪೇರಿ ಮಾಡಿದ ಕೆಲ ಹೊತ್ತಿನಲ್ಲಿ ಸ್ಪೋಟಗೊಂಡ_(Blast) ಘಟನೆ ತಾಲೂಕಿನ ಕೇಣಿಯ ಮನೆಯೊಂದರಲ್ಲಿ ಸಂಭವಿಸಿದೆ.

ಘಟನೆಯಲ್ಲಿ ಆರು ಜನರಿಗೆ ಗಾಯಗಳಾಗಿದ್ದು, ಈರ್ವರ ಪರಿಸ್ಥಿತಿ ಗಂಭೀರವಾಗಿದೆ.  ಕೇಣಿಯ ಗೌರೀಶ ‌ನಾಯಕ ಎಂಬುವವರ ಮನೆಯ ಸಿಲೆಂಡರ ಸೋರಿಕೆ(Cylinder Leakage) ಆಗಿದ್ದರಿಂದ ಸಿಲೆಂಡರನ್ನು ಸರಿಪಡಿಸಲು  ಶ್ರವಣ ಬಂಟ (55) ಎನ್ನುವವರಿಗೆ ಕರೆದಿದ್ದರು. ಶ್ರವಣ ಬಂಟ ಸಿಲೆಂಡರ್ ದುರಸ್ತಿ ಪಡಿಸಿ ಸರಿ ಇದೆ ಎಂದು ಖಚಿತ ಪಡಿಸಿ ಹೊರಡುವಷ್ಟರಲ್ಲಿ ಬಾಡಿಗೆ ಮನೆಯಲ್ಲಿರುವ ಸುದರ್ಶನ ಲೋಕಪ್ಪ ನಾಯ್ಕ (48) ಎನ್ನುವವರು ಬೆಂಕಿ ಕಡ್ಡಿಯನ್ನು ಅಡುಗೆ ಮಾಡುವ ಗ್ಯಾಸ್ ಒಲೆಯ(Gas Stove) ಹತ್ತಿರ ಗೀರಿದ್ದು ಏಕಾಏಕಿ  ಬೆಂಕಿ ಹತ್ತಿಕೊಂಡಿದೆ.

ಈ ಸಂದರ್ಭದಲ್ಲಿ ಮನೆಯೊಳಗಿದ್ದ ಸುದರ್ಶನ ಲೋಕಪ್ಪ ನಾಯ್ಕ, ಅವರ ಪತ್ನಿ ರೂಪಾಳಿಗೂ ಸಹ ಚಿಕ್ಕಪುಟ್ಟ ಸುಟ್ಟ ಗಾಯಗಳಾಗಿವೆ. ಜೊತೆಯಲ್ಲಿ ಸಿಲೆಂಡರ್ ದುರಸ್ತಿ ಮಾಡಲು ಬಂದ ಶ್ರವಣ ಬಂಟ ಎನ್ನುವವರಿಗೂ ತೀವ್ರ ತರಹದ ಗಾಯಗಳಾಗಿವೆ. ಸುದರ್ಶನ್ ಅವರ ಮಗ ಶಿವಪ್ರಸಾದ ನಾಯ್ಕ (12) ಇವರಿಗೂ ಅಲ್ಪಸ್ವಲ್ಪ ಸುಟ್ಟ ಗಾಯಗಳಾಗಿದೆ. ಮನೆಯ ಮಾಲಕ ಗೌರೀಶ ನಾಯಕರವರ ಮೊಮ್ಮಗ ಕೃಷ್ಣ ದೀಲಿಪ ನಾಯಕ (4) ಈತನಿಗೂ ಸುಟ್ಟಗಾಯಗಳಾಗಿವೆ. ಜೊತೆಯಲ್ಲಿ ತನ್ನ ಮೊಮ್ಮಗನನ್ನು ಕರೆತರಲು ಸಿಲೆಂಡರ್ ರಿಪೇರಿ ಮಾಡುವಲ್ಲಿ ತೆರಳಿದ ಗಿರಿಜಾ ಗೌರೀಶ ನಾಯಕ ಎನ್ನುವವರಿಗೂ ಗಾಯಗಳಾಗಿದೆ. ಗಾಯಾಳುಗಳನ್ನಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಅಂಕೋಲಾ ಪೊಲೀಸರು(Ankola Police),  ಅಗ್ನಿಶಾಮಕ ಇಲಾಖೆಯ(Fire Department) ಅಧಿಕಾರಿಗಳು,  ಕಂದಾಯ ಇಲಾಖೆಯವರು(Revenue Department) ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.  ಅಂಕೋಲಾ ಪೋಲಿಸ್ ಠಾಣೆಯಲ್ಲಿ(Ankola Police Station) ಪ್ರಕರಣ ದಾಖಲಿಸಲಾಗಿದೆ.

ಇದನ್ನು ಓದಿ : ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಆತ್ಮಹತ್ಯೆ.