ಧಾರವಾಡ : ಚಹಾದಂಗಡಿ ಕಳ್ಳತನಕ್ಕೆ ಹೊಂಚು ಹಾಕಿದ ಮೂವರು ವಿಫಲರಾಗಿ ವಾಪಸ್ ಹೋದ ಘಟನೆ ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದಲ್ಲಿ ನಡೆದಿದೆ.
ಮಕ್ತುಂಸಾಬ್ ಶಿರಕೋಳ ಎಂಬುವವರಿಗೆ ಸೇರಿದ ಚಹಾದಂಗಡಿಯಾಗಿದ್ದು ಮಧ್ಯೆ ರಾತ್ರಿ ಬೈಕ್ ಮೇಲೆ ಬಂದಿದ್ದ ಮೂವರು ಕಳ್ಳರು ಮುಂಬದಿಯ ಲಾಕ್ ಮುರಿಯಲು ಮುಂದಾಗಿದ್ದಾರೆ. ಆದರೆ ಮೂವರಿಂದಲೂ ಲಾಕ್ ಮುರಿಯಲು ಸಾಧ್ಯವಾಗದೆ ಕೈಕೈ ಹಿಸುಕಿಕೊಂಡಿದ್ದಾರೆ.
ನಂತರ ಬಂದ ದಾರಿಗೆ ಸುಂಕವಿಲ್ಲ ಎಂದು ಖಾಲಿ ಕೈಯಲ್ಲಿ ವಾಪಸ್ ಆಗಿದ್ದಾರೆ. ಕಳ್ಳರ ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.