ಇ ಸಮಾಚಾರ ಡಿಜಿಟಲ್ ನ್ಯೂಸ್(esamachara  digital news) ಬೆಂಗಳೂರು(Bangalore) : ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೇಲೆಕೇರಿ ಬಂದರಿನಿಂದ(Belekeri Port) ಅಕ್ರಮವಾಗಿ  ಅದಿರು ರಫ್ತು(Iron ore Export) ಮಾಡಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(Enforcement Directorate) ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ(Illegal Money Laundering) ಪ್ರಕರಣದಲ್ಲಿ ಬಂಧಿತರಾಗಿದ್ದ  ಕಾಂಗ್ರೆಸ್ ಶಾಸಕ ಸತೀಶ್ ಸೈಲ್(Congress MLA Satish Sail) ಅವರಿಗೆ ಇಂದು ಹೈಕೋರ್ಟ್  ಮಧ್ಯಂತರ ಜಾಮೀನು(Interim bail)/ಮಂಜೂರು ಮಾಡಿದೆ.

ಶಾಸಕ ಸತೀಶ ಸೈಲ್(MLA Satish Sail) ವೈದ್ಯಕೀಯ ಕಾರಣದ ಸಲುವಾಗಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌‌ ಜಾಮೀನು(Highcourt Bail) ಮಂಜೂರು ಮಾಡಿದೆ. ಅವರಿಗೆ ಲಿವರ್ ಕಸಿ (Liver transplant) ಮಾಡಿಸಬೇಕಿರುವುದರಿಂದ ಜಾಮಿನು ನೀಡಲಾಗುತ್ತಿದೆ. ಅಲ್ಲದೇ  ಲಿವರ್ ಕಸಿ(Liver transplant) ಕುರಿತು ಎರಡು ವಾರಕ್ಕೊಮ್ಮೆ ವರದಿ ಸಲ್ಲಿಸಬೇಕು. ಎಂಟು ವಾರಗಳಿಗೊಮ್ಮೆ ಆರೋಗ್ಯದ ಸ್ಥಿತಿಗತಿ ಬಗ್ಗೆ ವೈದ್ಯಕೀಯ ವರದಿಯನ್ನು(Medical Report) ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು  ನಿರ್ದೇಶಿಸಿ   ಜಾಮೀನು ಮಂಜೂರು(Bail Senction) ಮಾಡಲಾಗಿದೆ.

ಸೈಲ್ ಅವರು ಪ್ರಾಸಿಕ್ಯೂಷನ್ ಸಾಕ್ಷ್ಯದ ಮೇಲೆ ಪ್ರಭಾವ ಬೀರಬಾರದು. ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತೊಂದರೆ ಉಂಟು ಮಾಡಬಾರದು. ಐದು ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಒಂದು ಭದ್ರತಾ ಖಾತರಿ ಒದಗಿಸಬೇಕು ಎಂದು ಹೈಕೋರ್ಟ್‌ ಷರತ್ತನ್ನ(High court Condition) ವಿಧಿಸಿದೆ.

ಉತ್ತರಕನ್ನಡ ಜಿಲ್ಲೆಯ(Uttarakannada District) ಅಂಕೋಲಾ ತಾಲೂಕಿನ  ಬೇಲೇಕೇರಿ ಬಂದರಿನಲ್ಲಿ(Belekeri Port) ವಶಕ್ಕೆ ಪಡೆದು ಸಂಗ್ರಹಿಸಲಾಗಿದ್ದ ಸಾವಿರಾರು ಟನ್‌ಗಳಷ್ಟು ಕಬ್ಬಿಣದ ಅದಿರನ್ನು(Iron Ore)  ಅಕ್ರಮವಾಗಿ ರಪ್ತು ‌ ಮಾಡಿದ ಪ್ರಕರಣದಲ್ಲಿ ಶಾಸಕ ಸತೀಶ್‌ ಸೈಲ್‌ಗೆ(MLA Satish Sail) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಏಳು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಸಿಐಅರ್ ದಾಖಲಿಸಿಕೊಂಡಿದ್ದ ಇಡಿ ಸಹ ತನಿಖೆ ಆರಂಭಿಸಿತ್ತು.

ಇಡಿ ದಾಳಿ ಸಂದರ್ಭದಲ್ಲಿ ಕಳೆದ ಆಗಸ್ಟ್‌ 13 ಮತ್ತು 14ರಂದು ಸತೀಶ್ ಅವರ ಕಾರವಾರ ಮತ್ತು ಬೆಂಗಳೂರಿನ ಮನೆಗಳ ಮೇಲೆ ಇಡಿ ದಾಳಿ(ED Raid) ನಡೆಸಿದ ಸಂದರ್ಭದಲ್ಲಿ 13 ಕೋಟಿಯಷ್ಟು ನಗದು ಮತ್ತು ಚಿನ್ನಾಭರಣ ವಶಕ್ಕೆ ಪಡೆಯಲಾಗಿತ್ತು.   ಸೆಪ್ಟೆಂಬರ್ 10 ರಂದು ವಿಚಾರಣೆಗೆ ಹಾಜರಾಗಿದ್ದ ಸತೀಶ್‌ ಸೈಲ್ ಅವರನ್ನು ಇಡಿ ಬಂಧಿಸಿತ್ತು.

ಹೈಕೋರ್ಟ್ ಜಾಮೀನು ನೀಡಿರುವುದರಿಂದ ಶಾಸಕ ಸತೀಶ ಸೈಲ್ ಕೊಂಚ ನಿರಾಳರಾಗಿದ್ದಾರೆ.

ಇದನ್ನು ಓದಿ : ಖೈದಿಗಳಿಗೆ ಅಕ್ರಮವಾಗಿ ಗಾಂಜಾ, ಸಿಗರೇಟ್ ಹಾಗೂ ಮೊಬೈಲ್ ಪೂರೈಕೆ – ಮೂವರು ಆರೋಪಿಗಳ ಬಂಧನ

ಬಿಜೆಪಿ ಮುಖಂಡನ ಹತ್ಯೆಗೆ ಸಂಚು ಪ್ರಕರಣ. ಕೊಲೆ ಮಾಡಲು ಬಂದ ಗುಂಪಿನವನೇ ಫಿನಿಶ್ ಆದ ಕಥೆ.*

ರೀಲ್ಸ್ ರಾಣಿ ಸಹವಾಸ. ಜ್ಯೋತಿಷ್ಯ ಹೇಳುವವ ಜೈಲುವಾಸ.