ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಜೋಯಿಡಾ (Joida): ಕಂದಾಯ ಇಲಾಖೆ(Revenue Department) ಅಧಿಕಾರಿಗಳ ವಿರುದ್ಧ ಶಾಸಕ ಆರ್ ವಿ ದೇಶಪಾಂಡೆ(R V Deshapande) ಕೆಂಡಾಮಂಡವಾದ ಘಟನೆ ಜೋಯಿಡಾದಲ್ಲಿ ನಡೆದಿದೆ.
ತಾಲೂಕಿನ ರಾಮನಗರದ ಶಾರದ ಸೋಲೆಕರ್ ಎಂಬಾಕೆಯ ಮನೆ ಮುರಿದು ಬಿದ್ದಿತ್ತು. ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ವರ್ಷವಾದರೂ ಪರಿಹಾರ ಸಿಕ್ಕಿರಲಿಲ್ಲ. ಆದರೆ ಅಧಿಕಾರಿ ನಿರ್ಲಕ್ಷ್ಯ ಮಾಡಿರೋದು ಗೊತ್ತಾಗಿತ್ತು.
ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಗೆ ಮಾಹಿತಿ ಕೇಳಿದ ದೇಶಪಾಂಡೆ ಅವರು ರೆಹಮಾನ್ ಎನ್ನುವ ಕಂದಾಯ ಇಲಾಖೆ ಸಿಬ್ಬಂದಿಯೊಬ್ಬರನ್ನ ಪ್ರಶ್ನಿಸಿದಾಗ ಹಾರಿಕೆ ಉತ್ತರ ನೀಡಲು ಮುಂದಾದ. ಇದರಿಂದ ಸಿಟ್ಟಿಗೆದ್ದಿದ್ದ ಆರ್ ವಿ ದೇಶಪಾಂಡೆ(R V Deshapande) ಸಿಬ್ಬಂದಿಯನ್ನ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.
ನಿರ್ಲಕ್ಷ್ಯ ತೋರಿದ ಸಿಬ್ಬಂದಿಗಳನ್ನ ಅಮಾನತು ಮಾಡುವ ಎಚ್ಚರಿಕೆಯನ್ನ ನೀಡಿದರು. ಒಂದು ಹಂತದಲ್ಲಿ ಸಿಟ್ಟಿಗೆದ್ದ ಅವರು ಕೈನಲ್ಲಿದ್ದ ನೀರಿನ ಬಾಟಲಿ ಎತ್ತಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನು ಓದಿ: ಮಲ್ಪೆ ಪ್ರಕರಣ. ಮೂವರ ಬಿಡುಗಡೆಗೆ ಆದೇಶ.