ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal) : ಮಹಿಳೆಯರ ಸ್ಥೈರ್ಯ ವೃದ್ಧಿಸುವ ಪಂಚ ಕಾರ್ಯಕ್ರಮದೊಡನೆ ಮೇ 3 ರಂದು ಮುರ್ಡೇಶ್ವರದಲ್ಲಿ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶ(Women Conferance) ನಡೆಯಲಿದೆ.

ಜನತಾ ವಿದ್ಯಾಲಯ ಮುರ್ಡೇಶ್ವರದಲ್ಲಿ(Janata Vidyalaya Murdeshwar) ಒಂದು ದಿನಗಳ ಕಾಲ ಮಹಿಳೆಯರಿಗಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಮಹಿಳಾ ನೌಕರ ಸಂಘದ ಪ್ರಮುಖರು ತಿಳಿಸಿದ್ದಾರೆ.

ಭಟ್ಕಳದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಮಹಿಳೆಯರಿಗಾಗಿ ಜಾನಪದ ನೃತ್ಯ, ಕೋಲಾಟ, ಭಜನಾ ನೃತ್ಯ ಆಯೋಜಿಸಲಾಗಿದ್ದು ವಿಶೇಷವಾಗಿ ಮಹಿಳಾ ಸಂತೆ ಮತ್ತು ಮಹಿಳಾ ಸಮ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಮಹಿಳಾ ಸಂತೆ(Mahila Sante) ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವವರು 27/4/2025  ರೊಳಗೆ    ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ  9449688543,  7892865874 ಕಾರ್ಯಕ್ರಮ ಸಂಘಟಕರನ್ನ ಸಂಪರ್ಕಿಸಲು ಕೋರಿದ್ದಾರೆ. 

ಪತ್ರಿಕಾಗೋಷ್ಟಿಯಲ್ಲಿ ಅಖಿಲ ಕರ್ನಾಟಕ ಮಹಿಳಾ ನೌಕರರ ಸಂಘ ಜಿಲ್ಲಾಧ್ಯಕ್ಷೆ  ನೇತ್ರಾವತಿ ಶ್ಯಾನಭಾಗ, ಮಹಿಳಾ ಸಮಾವೇಶದ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷೆ  ಡಾ. ಸವಿತಾ ಕಾಮತ, ಕರ್ನಾಟಕ ಮಹಿಳಾ ನೌಕರರ ಸಂಘ ಜಿಲ್ಲಾ ಉಪಾಧ್ಯಕ್ಷೆ ಹಾಗೂ ಅಖಿಲ  ಮಹಿಳಾ ನೌಕರರ ಸಂಘ ಹಿರಿಯ ಗೌರವಾಧ್ಯಕ್ಷೆ  ಹಾಗೂ ಸಾವಿತ್ರಿ ಬಾಯಿ ಫುಲೆ ಸಂಘದ ಜಿಲ್ಲಾಧ್ಯಕ್ಷೆ   ಜಯಶ್ರೀ ಮಂಜಪ್ಪ ನಾಯ್ಕ,  ಉಪ ತಹಶೀಲ್ದಾರರು ಖಜಾಂಚಿ ವತ್ನಿಮಣಿ ಚಿತ್ರಾಪುರ,  ಸಾವಿತ್ರಿ ಬಾಯಿ ಫುಲೆ ಸಂಘದ ತಾಲೂಕು  ಅಧ್ಯಕ್ಷೆ  ಶೋಭಾ ನಾಯ್ಕ, ಸಂಘಟನಾ ಕಾರ್ಯದರ್ಶಿ  ನೂರ ಜಹಾನ್, ರಾಷ್ಟ್ರೀಯ ಯೋಗ ತರಬೇತಿ ನೀಡುವ ಯೋಗ ಗುರು ರಾಜೇಶ್ವರಿ ಹೆಗ್ಡೆ  ಹಾಜರಿದ್ದರು.

ಇದನ್ನು ಓದಿ : ಕಾರವಾರ ಹತ್ಯೆ ಪ್ರಕರಣ. ನಿರ್ಲಕ್ಷ್ಯ ವಹಿಸಿದ್ದಕ್ಕೆ ನಾಲ್ವರು ಪೊಲೀಸರ ಅಮಾನತು?

ಜಾಹೀರಾತು ನೋಡಿ ಸೀರೆ ಬುಕ್ ಮಾಡಿದ್ರು. ಕಂಪನಿಯ ಮೋಸ ಎಂದು ದೂರು ದಾಖಲು.