ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar): ನಗರಸಭಾ ಮಾಜಿ ಸದಸ್ಯ, ರೌಡಿ ಶೀಟರ್ ಸತೀಶ್ ಕೋಳಂಬಕರ್ ಕೊಲೆ ಆರೋಪಿ ಮೇಲೆ ಫೈರಿಂಗ್ ನಡೆದಿದೆ.

ಕಾರವಾರ ತಾಲೂಕಿನ ಮಾಜಾಳಿ‌ಯ ದೇವತಿ ಶಿಟ್ಟ ಸಮೀಪದ ರಾ ಹೆದ್ದಾರಿ ಬಳಿ ಘಟನೆ ನಡೆದಿದೆ. ಏಪ್ರಿಲ್ 20 ರಂದು ಸಂತೆ ಮಾರುಕಟ್ಟೆ ಬಳಿ  ನಗರಸಭಾ ಮಾಜಿ ಸದಸ್ಯ, ರೌಡಿ ಶೀಟರ್ ಸತೀಶ್ ಕೋಳಂಬಕರ್   ಹತ್ಯೆ ಮಾಡಲಾಗಿತ್ತು.

ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿ ನಿತೇಶ್ ತಾಂಡೇಲ ಸತೀಶ್ ನನ್ನ ಕೊಲೆ ಮಾಡಿದ್ದ. ಇಂದು ಆರೋಪಿ ನಿತೇಶ್ ನನ್ನ ಪಂಚನಾಮೆ ಮಾಡಲಾಗುತಿತ್ತು. ಗೋವಾದ ಪ್ರದೇಶವೊಂದರಲ್ಲಿ ಪಂಚನಾಮೆ ಮುಗಿಸಿ ವಾಪಾಸ್ ಬರುತ್ತಿದ್ದಾಗ ನಿತೇಶ್ ಮೂತ್ರ ವಿಸರ್ಜನೆ ಮಾಡಬೇಕು ಎಂದಿದ್ದ. ಆಗ ಪೊಲೀಸರು ವಾಹನದಿಂದ ಇಳಿಸುವ ನಿತೇಶ್ ಬಿಯರ್ ಬಾಟಲಿ  ಒಡೆದು ಪೊಲೀಸರ ಮೇಲೆ ಪ್ರತಿರೋಧ ತೋರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಈ ವೇಳೆ ರಕ್ಷಣೆಗಾಗಿ ಪಿಎಸ್ಐ ಕುಮಾರ್ ಕಾಂಬ್ಳೆ ನಿತೇಶ್  ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆ ಸಂದರ್ಭದಲ್ಲಿ ಪಿಎಸ್ಐ ಕುಮಾರ್ ಕಾಂಬ್ಳೆ, ಹವಾಲ್ದಾರ್ ಹಸನ್ ಕುಟ್ಟಿ, ಸಿಬ್ಬಂದಿ ಗಿರೀಶ್ ಅಯ್ಯಪ್ಪ ಅವರಿಗೆ ಗಾಯವಾಗಿದೆ.

ಆರೋಪಿ ನಿತೇಶ್ ಗೆ ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ  ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ.

ಸ್ಥಳಕ್ಕೆ ಎಸ್ಪಿ ಎಂ ನಾರಾಯಣ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.