ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಗೋಕರ್ಣ (Gokarn): ಪುರಾಣ ಪ್ರಸಿದ್ದ ಕ್ಷೇತ್ರ ಗೋಕರ್ಣದ ಮಹಾಬಲೇಶ್ವರ(Gokarn Mahabaleshwar) ದೇವಸ್ಥಾನಕ್ಕೆ  ಗೃಹ ಸಚಿವ(Home Minister) ಡಾ.‌ಜಿ‌ ಪರಮೇಶ್ವರ್  ಭೇಟಿ‌ ನೀಡಿದರು.

ಬುಧವಾರ ಬೆಳಿಗ್ಗೆ ಗೋವಾ(Goa) ಮೂಲಕ ಆಗಮಿಸಿದ ಪರಮೇಶ್ವರ್ ಅವರನ್ನ ಉತ್ತರಕನ್ನಡ(Uttarkannada) ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ(Mankal Vaidya) ಅವರು ಮಾಜಾಳಿ ಗಡಿಯಲ್ಲಿ ಬರಮಾಡಿಕೊಂಡರು.

ಬಳಿಕ  ಅವರು ಅರ್ಚಕರ ಮೂಲಕ ಗೋಕರ್ಣದ ಮಹಾಗಣಪತಿ ದೇವರಿಗೆ ಪೂಜೆ ಸಲ್ಲಿಸಿ ನಂತರ ಮಹಾಬಲೇಶ್ವರ ದೇವರ ಆತ್ಮ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ನವದಾನ್ಯ ಅಭಿಷೇಕ ಮಾಡಿದರು.

ಈ ಸಂದರ್ಭದಲ್ಲಿ ಗೃಹ ಸಚಿವರಿಗೆ  ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ(Mankal Vaidy), ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ, ಮುಖಂಡರಾದ ಗೋಪಾಲಕೃಷ್ಣ ನಾಯಕ, ರಾಜಗೋಪಾಲ ಅಡಿ, ಪ್ರದೀಪ್ ನಾಯಕ್ ಸೇರಿದಂತೆ ಇತರರು ಇದ್ದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಿ ಪರಮೇಶ್ವರ, ಬಹಳ ದಿನಗಳಿಂದ ಗೋಕರ್ಣಕ್ಕೆ ಭೇಟಿ ನೀಡಲು ಆಗಿರಲಿಲ್ಲ. ಈಗ ಬಂದು ಪೂಜೆ ಸಲ್ಲಿಸಿದ್ದೇನೆಂದರು.

ಹನಿಟ್ರ್ಯಾಪ್ ವಿಚಾರವಾಗಿ ಸಚಿವ ರಾಜಣ್ಣ ಅವರು ನಿನ್ನೆ  ಬಂದು ಚರ್ಚೆ ಮಾಡಿ ಮನವಿ ಕೊಟ್ಟಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಮನವಿಗೆ ಅನುಗುಣವಾಗಿ ನಿರ್ಣಯ ಕೈಗೊಳ್ಳುತ್ತೇವೆ ಎಂದ ಅವರು,  18 ಬಿಜೆಪಿ ಶಾಸಕರ ಅಮಾನತು ವಿಚಾರಕ್ಕೆ ಪ್ರತಿಕ್ರಿಯಿಸಿದರು.

ವಿಧಾನಸಭೆ ಅಧಿವೇಶನ ನಡೆಸುವವರು ಸಭಾಧ್ಯಕ್ಷರಾಗಿರುತ್ತಾರೆ. ಅಧಿವೇಶನ ಸಂದರ್ಭದಲ್ಲಿ ಸದನ ಸಂಪೂರ್ಣ ಅವರ ಅಧೀನದಲ್ಲಿರುತ್ತೆ. ಯಾವುದು ಸರಿ ಯಾವುದು ತಪ್ಪು ಎಂಬುದು ಅವರಿಗೆ ಗೊತ್ತಿದೆ. ಸಭೆಯಲ್ಲಿ ಆದ ಬೆಳವಣಿಗೆಗೆ ಪೂರಕವಾಗಿ ಸಭಾಧ್ಯಕ್ಷರು ನಿರ್ಣಯ ಕೈಗೊಂಡಿದ್ದಾರೆ. ಸಭಾಧ್ಯಕ್ಷರ ನಿರ್ಣಯವನ್ನು ನಾವು ಪ್ರಶ್ನಿಸಲು ಆಗುವುದಿಲ್ಲ. ಈ ಬಗ್ಗೆ ನಾನು ಜಾಸ್ತಿ ವ್ಯಾಖ್ಯಾನ ಮಾಡುವುದಕ್ಕೆ ಹೋಗುವುದಿಲ್ಲ. ಸಭಾಧ್ಯಕ್ಷರು ಕೈಗೊಂಡಿರುವ ತಿರ್ಮಾನವನ್ನ ನಾವೆಲ್ಲರೂ ಗೌರವಿಸುತ್ತೇವೆ ಎಂದರು.

ಇದನ್ನು ಓದಿ : ಇನ್ನೂ ಕೆಲದಿನ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಸಿಐಎಸ್‌ಎಫ್ ಯೋಧರಿಂದ ಮೈ ನವೀರೇಳಿಸುವ ಸಾಹಸ ಪ್ರದ