ದಾಂಡೇಲಿ : ಹಳಿಯಾಳ ತಾಲೂಕಿನ ಅಡಿಕೆ ಹೊಸೂರು ಗ್ರಾಮದಿಂದ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ದಾಂಡೇಲಿ ನಗರದ ಹಳಿಯಾಳ ರಸ್ತೆಯಲ್ಲಿ ವಶಕ್ಕೆ ಪಡೆಯಲಾಗಿದೆ.

ಕೆ.ಎ31, 3994 ಸಂಖ್ಯೆಯ ಟಾಟಾ ಎಸಿ ವಾಹನದಲ್ಲಿ  ಎರಡು ಜಾನುವಾರುಗಳನ್ನು ದಾಂಡೇಲಿಗೆ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಹಳಿಯಾಳ ರಸ್ತೆಯ ಮೂರನೇ ನಂ ಗೇಟ್ ಹತ್ತಿರ ವಾಹನವನ್ನು ತಡೆದು ನಿಲ್ಲಿಸಿದಾಗ ಅಕ್ರಮ ಜಾನುವಾರು ಸಾಗಾಟ ಬೆಳಕಿಗೆ ಬಂದಿದೆ.

ಜಾನುವಾರು ಸಹಿತ ವಾಹನವನ್ನು ನಗರ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದು  ಜಾನುವಾರುಗಳ ಮಾಲಕ  ಶೆರೀಫ್ ಸಿದ್ದಿ ಎಂಬುವವನ ವಿಚಾರಣೆ ಮಾಡಲಾಗಿದೆ. ಈ ವೇಳೆ ಮಾತನಾಡಿದ ಶೆರೀಫ್ ಸಿದ್ಧಿ,  ತನ್ನದೇ ಜಾನುವಾರು ಹಾಗೂ ತನ್ನದೇ ವಾಹನ ಎಂದು ಹೇಳಿದ್ದಾನೆ. ಈ ಬಗ್ಗೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.