ಜೊಯಿಡಾ:  ರಾಮನಗರ ಯುವಕ  ಪೊಲೀಸ್ ಠಾಣೆಯ ಮುಂದೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ತನಿಖೆ ನ್ಯಾಯತವಾಗಿ ಮಾಡಬೇಕೆಂದು ಮಾಜಿ ಶಾಸಕ ಸುನೀಲ್ ಹೆಗಡೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್ ಅವರನ್ನ ಒತ್ತಾಯಿಸಿದ್ದಾರೆ.

ಕುಣಬಿ ಸಮುದಾಯದ ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ  ಸುನಿಲ ಹೆಗಡೆ  ಭೇಟಿ ನೀಡಿ ಭಾಸ್ಕರ ಅವರ ಕುಟುಂಬಕ್ಕೆ  ಸಾಂತ್ವನ ಹೇಳಿದರು. ನಂತರ ಎಸ್.ಪಿ  ಎಸ್ ವಿಷ್ಣುವರ್ಧನ ಜೊತೆ ಮಾತುಕತೆ ನಡೆಸಿದರು.

ಅದಷ್ಟು ಬೇಗ ತನಿಖೆ ನಡೆಸಿ ತಪ್ಪಿತಸ್ತರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಎ.ಎಸ್ ಪಿ  ಸಿ.ಟಿ ಜಯಕುಮಾರ, ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ಗೊಸಾವಿ, ಸುಭಾಷ ಗಾವಡಾ, ಪ್ರಸನ್ನ ಗಾವಡಾ, ಅಜಿತ ಮಿರಾಶಿ ಮುಂತಾದವರು ಉಪಸ್ಥಿತರಿದ್ದರು.