ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ಮನೆಯಲ್ಲಿ ಮಲಗಿದ್ದ ವೇಳೆ ಹಾವು ಕಚ್ಚಿ ಬಾಲಕನೋರ್ವ(Snake Bite Child) ಮೃತಪಟ್ಟು ಸಹೋದರಿ ಗಂಭೀರವಾಗಿ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಶಿರಸಿಯಲ್ಲಿ(Sirsi) ನಡೆದಿದೆ.
ತಾಲೂಕಿನ ಬನವಾಸಿ(Banavasi) ವ್ಯಾಪ್ತಿಯ ಸಹಸ್ರಳ್ಳಿಯಲ್ಲಿ ಬೆಳಗಿನ ಜಾವ ಘಟನೆ ನಡೆದಿದೆ. ಆರನೇ ತರಗತಿ ವಿದ್ಯಾರ್ಥಿಯಾಗಿದ್ದ ಮಿಥುನ್ ಪುಟ್ಟಪ್ಪ ನಾಯ್ಕ (12) ಹಾವಿನ ಕಡಿತಕ್ಕೊಳಗಾಗಿ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಮೃತನ ಸಹೋದರಿ ದಿಕ್ಷಾ ಪುಟ್ಟಪ್ಪ ನಾಯ್ಕ ಚಿಕಿತ್ಸೆ ಪಡೆಯುತ್ತಿದ್ದಾಳೆ.
ರಾತ್ರಿ ಮಿಥುನ್ ಮತ್ತು ಆತನ ಸಹೋದರಿ ದಿಕ್ಷಾ ಊಟಮಾಡಿ ತಂದೆಯ ಜೊತೆಯಲ್ಲಿ ಮಲಗಿದ್ದರು. ಈ ಸಂದರ್ಭದಲ್ಲಿ ಮಿಥುನ್ ಮತ್ತು ಆತನ ಸಹೋದರಿ ಎಕಾಎಕಿ ವಾಂತಿ ಮಾಡುತ್ತಿದ್ದರು.ಇದನ್ನು ಗಮನಿಸಿದ ಪಾಲಕರು ಲೈಟ್ ಹಾಕಿ ನೋಡಿದಾಗ ಮಕ್ಕಳಿಬ್ಬರ ಆರೋಗ್ಯದಲ್ಲಿ ವ್ಯತ್ಯಾಸವಾಗಿರುವುದನ್ನ ಗಮನಿಸಿದ್ದಾರೆ. ಅಕ್ಕಪಕ್ಕದವರಿಗೆ ವಿಷಯ ತಿಳಿಸಿದ್ದಾರೆ. ಅವರು ಬರುವಷ್ಟರಲ್ಲಿ ಹಾವೊಂದು ಮನೆಯೊಳಗಿಂದ ಕತ್ತಲಲ್ಲಿ ಹೊರಗೆ ಹೋಗುತ್ತಿರುವುದು ಕಂಡುಬಂದಿದೆ.
ತಕ್ಷಣಕ್ಕೆ ಇಬ್ಬರು ಮಕ್ಕಳನ್ನು ಸರಕಾರಿ ಆಸ್ಪತ್ರೆಗೆ(Government Hospital) ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಆದರೆ ಮಿಥುನ್ ದಾರಿ ಮದ್ಯದಲ್ಲಿಯೇ ಮೃತಪಟ್ಟಿದ್ದಾನೆ. ದೀಕ್ಷಾ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾಳೆಂದು ತಿಳಿದುಬಂದಿದೆ.
ಬನವಾಸಿ ಠಾಣೆ ಪೋಲಿಸರು(Banavasi Station Police) ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡರಸಿದ್ದಾರೆ. ವಿಷಪೂರಿತ ಹಾವು ಮೃತ ಮಿಥುನ್ ಕಿವಿಗೆ ಹಾಗು ದಿಕ್ಷಾ ಇವಳ ಕೈ ಬೆರಳಿಗೆ ಕಚ್ಚಿರುವುದು ಕಂಡು ಬಂದಿರುವ ಬಗ್ಗೆ ವೈದ್ಯರು ಖಚಿತ ಪಡಿಸಿದ್ದಾರೆ.
ಇದನ್ನು ಓದಿ : ಮಗಳಿಗೆ ಬುದ್ದಿವಾದ ಹೇಳಿದಕ್ಕೆ ತಂದೆ-ತಾಯಿ, ಸಹೋದರಿ ಹತ್ಯೆ. ಪ್ರಿಯಕರನೊಂದಿಗೆ ಪರಾರಿ.*
