ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಜೋಯಿಡಾ(joida)  : ತಾಲೂಕಿನ ಬಿರಿಯಂಪಾಲಿ ಗ್ರಾಮದ ಅಕೋಡಾದ ಹತ್ತಿರದ ಕಾಳಿ ನದಿಯಲ್ಲಿ(Kali River) ಸ್ನಾನಕ್ಕಿಳಿದ  ಯುವಕನೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ.

ದಾಂಡೇಲಿಯ(Dandeli) ಗಾಂಧಿನಗರದ (Gandhinagar) ನಿವಾಸಿ  ನಿರುಪಮ್ ನಾಮದೇವ ಕಾಂಬಳೆ ಅಲಿಯಾಸ್ ಭೀಮ್ (18) ಎಂಬಾತನೇ ಮೃತ ದುರ್ದೈವಿ. ಶನಿವಾರ ತನ್ನ ಗೆಳೆಯರ ಜೊತೆ ಅಕೋಡಾ(Akoda) ಸಮೀಪ ಇರುವ ಕಾಳಿ ನದಿಗೆ ತೆರಳಿದ್ದ.   ಸ್ನಾನ ಮಾಡಲೆಂದು ನದಿಗಿಳಿದ ಸಂದರ್ಭದಲ್ಲಿ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದ.    ಇಂದು ಬೆಳಗ್ಗೆ  ನಿರುಪಮ್  ಶವ ಪತ್ತೆಯಾಗಿದೆ.  ತಕ್ಷಣ ಮಹಾನ್ ಅಡ್ವೆಂಚರ್ಸ್ ಮತ್ತು ಫ್ಲೈ ಕ್ಯಾಚರ್ ರಾಫ್ಟ್ ತಂಡದವರ ಸಹಕಾರದಲ್ಲಿ ಪೊಲೀಸರು ಶವವನ್ನು ಮೇಲಕ್ಕೆ ತಂದಿದ್ದಾರೆ.

ದಾಂಡೇಲಿ ಗ್ರಾಮೀಣ ಠಾಣೆಯ(Dandeli Rural Station) ಪಿಎಸ್ಐ ಶಿವಾನಂದ ನಾವದಗಿ, ಎಎಸ್ಐಗಳಾದ ವೆಂಕಟೇಶ್ ತೆಗ್ಗಿನ್ ಮತ್ತು ಶಾಂತರಾಮ ಕಾಂಬಳೆ ಹಾಗೂ ಪೊಲೀಸರು ಸ್ಥಳದಲ್ಲಿದ್ದು, ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಮೃತ ಯುವಕನ ತಂದೆ ನಾಮದೇವ ಕಾಂಬಳೆ, ದಾಂಡೇಲಿಯ ಸಾರಿಗೆ ಘಟಕದ ಸಂಚಾರ ನಿರೀಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಮೃತ ಯುವಕ ನಿರುಪಮ್ ನಾಮದೇವ ಕಾಂಬಳೆ ಅಲಿಯಾಸ್ ಭೀಮ್ ಈ ವರ್ಷ ಪಿಯುಸಿ ತೇರ್ಗಡೆಯಾಗಿದ್ದು, ವಿಜ್ಞಾನ ವಿಭಾಗದಲ್ಲಿ ಶೇ. 80% ಫಲಿತಾಂಶವನ್ನು ಪಡೆದುಕೊಂಡಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ. ಸಿಇಟಿ ಪರೀಕ್ಷೆಯನ್ನು ಬರೆದಿದ್ದನು. ಇಂಜಿನಿಯರಿಂಗ್ ಇಲ್ಲವೇ ಬಿಎಸ್ಸಿ ಮಾಡಿ ಎಂಎಸ್ಸಿ ಮಾಡಿ ಉಪನ್ಯಾಸಕನಾಗಿ ಸೇವೆ ಮಾಡಬೇಕೆಂಬ ಇಚ್ಛೆಯನ್ನು ಹೊಂದಿದ್ದ ಎಂದು ಮೃತನ ತಂದೆ ಅಳಲು ತೋಡಿಕೊಂಡಿದ್ದಾರೆ.

ಇದನ್ನು ಓದಿ : ಭಟ್ಕಳದ ಒಂದೇ ಕುಟುಂಬದ ನಾಲ್ವರ ಕೊ ಪ್ರಕರಣ. ತಂದೆ, ಮಗನ ಅಪರಾಧ ಸಾಬೀತು.

ಗೋವಾದ ಜಾತ್ರೆಯಲ್ಲಿ ಕಾಲ್ತುಳಿತ. ಆರಕ್ಕೂ ಹೆಚ್ಚು ಭಕ್ತರ ಸಾವು