ಬೆಂಗಳೂರು : ಹವಾಮಾನ ಇಲಾಖೆ ಸೂಚಿಸಿದಂತೆ ಇಂದಿನಿಂದ ರಾಜ್ಯದ  ವಿವಿದೆಡೆ ಮಳೆ ಸುರಿದು ಬಾರಿ ಆವಾಂತರ ಸೃಷ್ಟಿಸಿದೆ.

ಮೇ 15ರವರೆಗೆ ಮಳೆಯೊಂದಿಗೆ ಗಾಳಿ, ಗುಡುಗು ಸಿಡಿಲು ಇರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಇಂದು ಮಧ್ಯಾಹ್ನದ ವೇಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಮಳೆಯಿಂದ ಅಲ್ಲಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪುತ್ತೂರಿನ  ಗಾಳಿ ಮಳೆಗೆ ಕೆಲಸ ಮನೆಗಳಿಗೆ ತೊಂದರೆಯಾಗಿದೆ. ಉರ್ಲಾಂಡಿಯಲ್ಲಿ ಶೋಭಾ ಹೆಗ್ಡೆ ಎಂಬುವವರ  ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದ್ದು ಮನೆಯಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದ ಕಾಲೂರು ಗ್ರಾಮದಲ್ಲಿ  ಎನ್.ಟಿ.ಲಿಂಗಮ್ಮ ಎಂಬವರಿಗೆ ಸೇರಿದ ಮನೆ ಕುಸಿದು ಬಿದ್ದಿದೆ.

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕಟ್ಟಿನಮನೆ ಗ್ರಾಮದಲ್ಲಿ ರಸ್ತೆಯ ಮರ ಬಿದ್ದು ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮೃತ ಪಟ್ಟಿದ್ದು  ಕಾರೊಂದು ಜಖಂಗೊಂಡಿದೆ. ಕಾರಿನಲ್ಲಿದ್ದ ಮೂವರಿಗೆ  ಗಾಯವಾಗಿದೆ. ಬಾಗಲಕೋಟೆ ಜಿಲ್ಲೆಯ ಹಳ್ಳೂರು ಗ್ರಾಮದ ಯುವಕನೋರ್ವ ಮಳೆಗೆ ಬಲಿಯಾಗಿದ್ದಾನೆ.
ಬೆಳಗಾವಿಯಲ್ಲಿ ಎರಡನೇ ದಿನವೂ ಮಳೆಯ ಅಬ್ಬರಿಸಿದೆ. ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜನರಿಗೆ  ಮಳೆರಾಯ ತಂಪನ್ನೇರಚಿದ್ದಾನೆ.  ಗೋವಾವೇಸ್ ಬಳಿಯ ಕಾರ್ಪೋರೇಷನ್ ಕಚೇರಿ ಆವರಣ,  ಮಜಗಾಂವ ಗ್ರಾಮದಲ್ಲಿನ ಮನೆಗಳಿಗೆ  ನೀರು ನುಗ್ಗಿದರಿಂದ ಜನಜೀವನ ಅಸ್ತವ್ಯಸ್ತವಾಯಿತು

ಚಿಕ್ಕೋಡಿ ಜಿಲ್ಲೆಯ  ಹುಕ್ಕೇರಿ, ರಾಯಬಾಗ, ನಿಪ್ಪಾಣಿ ತಾಲೂಕಿನ ವಿವಿಧೆಡೆ ಭಾರಿ ಮಳೆಯಾಗಿದೆ  ಧಾರಾಕಾರ ಮಳೆಯಿಂದ  ಬೀದಿಬದಿ ವ್ಯಾಪಾರಸ್ಥರು ಟೊಮೇಟೊ ಕಾಪಾಡಿಕೊಳ್ಳಲು ಹರಸಾಹಸ ಪಡಬೇಕಾಯಿತು.

ಶಿರಸಿ ತಾಲೂಕಿನ ದಾಸನಕೊಪ್ಪದಲ್ಲಿ ಮನೆ ಮತ್ತು ಅಂಗಡಿಗಳ ಮೇಲಚಾವಣಿ ಹಾರಿಹೋಗಿದೆ. ವಿದ್ಯುತ್ ಕೈಕೊಟ್ಟಿದೆ.

ಅಕಾಲಿಕ ಮಳೆಯಿಂದಾಗಿ ರಾಜ್ಯದಲ್ಲಿ ಬಾರಿ ತೊಂದರೆಯಾಗಿದೆ. ಇನ್ನೂ ಮೇ 15ರವರೆಗೆ ರಾಜ್ಯದ ವಿವಿಧ ಜಿಲ್ಲೆಯಗಳಲ್ಲಿ ಆರೆಂಜ್ ಮತ್ತು ಯಲ್ಲೋ ಅಲರ್ಟ್ ಘೋಷಿಸಲಾಗಿದೆ.