ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar) : ನಗರದ ಕೋಡಿಭಾಗ ದ ಪಂಜಾಬ್ ಪ್ರಂಟ್ ಲೈನ್ ಬೆಟಾಲಿಯನ್‌ನಲ್ಲಿ ನಾಯಕ್ ಸುಬೇದಾ‌ರ್ ಆಗಿದ್ದ ವಿಜಯ ವಿಠೋಬಾ ತಾಮೆ (44) ಹೃದಯಾಘಾತದಿಂದ  ಹರಿಯಾಣ(Haryan) ರಾಜ್ಯದ ಅಂಬಾಲಾದಲ್ಲಿ ಸಾವನ್ನಪ್ಪಿದ್ದಾರೆ.

ಮಂಗಳವಾರ ‘ಸೈನ್ಯದ ಪರೇಡ್ ಸಂದರ್ಭದಲ್ಲಿ ಎದೆ ನೋವಿನಿಂದ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯವಷ್ಟರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ  ಸೇನೆಯ ಅಧಿಕಾರಿಗಳು ವಿಜಯ ಅವರ ಕುಟುಂಬ ಮಾಹಿತಿ ನೀಡಿದ್ದರು.

‘ಕಳೆದ 25 ವರ್ಷಗಳಿಂದ ಭಾರತೀಯ ಸೇನೆಯಲ್ಲಿ(Indian army) ಕೆಲಸ ಮಾಡಿದ್ದರು. ಸೈನ್ಯದಿಂದ ನಿವೃತ್ತಿಯಾಗಲು ಮೂರು ವರ್ಷವಷ್ಟೇ ಬಾಕಿ ಇತ್ತು. ಮೃತರ ಅಂತ್ಯಕ್ರಿಯೆ ಗುರುವಾರ ಕಾರವಾರದಲ್ಲಿ ನಡೆಯಿತು. ಕೋಡಿಭಾಗದಿಂದ ನಂದಾನಗದ್ದವರೆಗೆ ಪಾರ್ಥಿವ ಶರೀರದ  ಅಂತಿಮ ಮೆರವಣಿಗೆ ನಡೆಸಲಾಯಿತು.

ಈ ವೇಳೆ ನೌಸೇನೆ, ಭೂ ಸೇನೆಯಿಂದ ಗೌರವ ಸಲ್ಲಿಸಲಾಯಿತು.   ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಕುಟುಂಬಸ್ಥರನ್ನ ಅಗಲಿದ್ದಾರೆ. ಯೋಧನ ನಿಧನಕ್ಕೆ ಕಾರವಾರ ನಾಗರಿಕರು ಕಂಬನಿ ಮಿಡಿದಿದ್ದಾರೆ.

ಇದನ್ನು ಓದಿ : ಭಟ್ಕಳದಲ್ಲಿ ಹೆದ್ದಾರಿ ತಡೆ, ಠಾಣೆಗೆ ಮುತ್ತಿಗೆ ಹಾಕಿದವರ ಮೇಲೆ ದಾಖಲಾಯ್ತು ಪ್ರಕರಣ.

ಮೀನುಗಾರ ಶಂಕಸ್ಪಾದ ಸಾವು. ಸ್ಥಳೀಯರ ಪ್ರತಿಭಟನೆ.

ಹೆದ್ದಾರಿ ತಡೆ, ಠಾಣೆಗೆ ಮುತ್ತಿಗೆ ಹಾಕಿದವರ ಮೇಲೆ ಮುಲಾಜಿಲ್ಲದೆ ಕ್ರಮ