ಶಿರಸಿ :  ಸಿಡಿಲು ಬಡಿದು ಶಿರಸಿ ತಾಲೂಕಿನ ಬನವಾಸಿಯಲ್ಲಿ ಬಾಲಕ ಮೃತಪಟ್ಟ ಘಟನೆ ನಡೆಯಿದೆ.

ಶನಿವಾರ ಸಂಜೆ    ಬಿರುಗಾಳಿ ಸಹಿತ ಭಾರಿ ಮಳೆಯಾಗಿತ್ತು. ಮಳೆ ಬಳಿಕ ಇಲ್ಲಿನ ಕದಂಬ ಮೈದಾನದಲ್ಲಿ  ಆಟವಾಡುತ್ತಿದ್ದ ಶಾಜಿದ್ ಆಸ್ಪಕ್ ಆಲಿ(16) ಎಂಬ  ಬಾಲಕನಿಗೆ  ಸಿಡಿಲು ಬಡಿದಿದೆ.  ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗದೆ ಮೃತಪಟ್ಟಿದ್ದಾನೆ

ಶಾಜೀದ್ ಮೀನು ಮಾರ್ಕೆಟ್‌ ರಸ್ತೆಯ ನಿವಾಸಿಯಾಗಿದ್ದು ತನ್ನ   ಗೆಳೆಯರೊಂದಿಗೆ ಎಂದಿನಂತೆ ಮೈದಾನದಲ್ಲಿ ಆಟವಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.