ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ (Bhatkal) : ಸ್ಪಿರಿಟ್  ಲಾರಿ ಪಲ್ಟಿಯಾಗಿ(Lorry overturn) ಆತಂಕ ಉಂಟಾದ ಘಟನೆ ತಾಲೂಕಿನ ರಾ ಹೆದ್ದಾರಿ 66 ಮುರ್ಡೇಶ್ವರದ ಬಸ್ತಿ ಸಮೀಪ ಸಂಭವಿಸಿದೆ..

ಲಾರಿ ಮಹಾರಾಷ್ಟ್ರದಿಂದ ಕೇರಳ(Maharashtra to keral) ಕಡೆ ತೆರಳುತಿತ್ತು. ಇದರಲ್ಲಿ ಟ್ಯಾಂಕ್ ಮೂಲಕ ಸುಮಾರು 9ಸಾವಿರ ಲೀಟರ್ ದ್ರಾಕ್ಷಾ ಸ್ಪೀರಿಟ್ ತುಂಬಿ ಸಾಗಿಸಲಾಗುತಿತ್ತು.  ಬಸ್ತಿ ಬಳಿ ನಸುಕಿನ ಜಾವ ಪಲ್ಟಿಯಾಗಿದೆ. ಪರಿಣಾಮವಾಗಿ ಲಾರಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸ್ಪೀಟ್  ಹೆದ್ದಾರಿಯ ಪಾಲಾಗಿದೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ (Fire Brigade) ಹಾಗೂ ಪೋಲಿಸರ ಪರಿಸ್ಥಿತಿ ನಿಭಾಯಿಸಿದ್ದಾರೆ. ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಮೋಹನ್ ಶೆಟ್ಟಿ, ಗಜಾನನ ದೇವಾಡಿಗ, ಸುಧಾಕರ್ ದೇವಾಡಿಗ, ಶಿವಪ್ರಸಾದ್ ನಾಯ್ಕ್, ನಾರಾಯಣ ಪಟಗಾರ ಅವರು ಹೆದ್ದಾರಿಯಲ್ಲಿ ಚೆಲ್ಲಿದ ಸ್ಪಿರಿಟ್ ನಿಂದ ತೊಂದರೆಯಾಗದಂತೆ ಪೋಮ್ ಸಿಂಪಡಿಸಿ ಆತಂಕ ದೂರ ಮಾಡಿದ್ದಾರೆ. ಮುರ್ಡೇಶ್ವರ್ ಠಾಣಾ (Murdeshwar Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನು ಓದಿ : ಕುಂಭಮೇಳಕ್ಕೆ ತೆರಳುವ ವೇಳೆ ದೆಹಲಿ ನಿಲ್ದಾಣದಲ್ಲಿ ಕಾಲ್ತುಳಿತ. 18 ಜನರ ದುರ್ಮರಣ.