ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal): ಮಹಾ ಶಿವರಾತ್ರಿ(Mahashiva) ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ವೈದ್ಯ(Mankal Vaidya) ಅವರು ಮುರ್ಡೇಶ್ವರದ ಶಿವನಿಗೆ ಪವಿತ್ರ ಗಂಗಾ ಜಲ(Ganga Jala) ಅಭಿಷೇಕವನ್ನ ಮಾಡಿಸಿ ಪೂಜೆ ಸಲ್ಲಿಸಿದರು.

ಪ್ರಯಾಗರಾಜ್ ನಲ್ಲಿ(Prayagaraj) ನಡೆದ ಕುಂಭ ಮೇಳದಲ್ಲಿ (Kumbhamela) ಭಾಗವಹಿಸಿದ ಸಚಿವರು ತ್ರಿವೇಣಿ ಸಂಗಮದ(Treeveni Sangama) ಪವಿತ್ರ ಜಲವನ್ನು ಶಿವನಿಗೋಸ್ಕರ ತಂದಿದ್ದರು. ಶಿವರಾತ್ರಿಯ ಮಹಾಪರ್ವದ ಸಂದರ್ಭದಲ್ಲಿ ಹಿರಿಯ ಪುರೋಹಿತರ ಸಮ್ಮುಖದಲ್ಲಿ ಶಿವ ಪರಮಾತ್ಮನಿಗೆ ಜಲದಿಂದ  ಅಭಿಷೇಕ ಮಾಡಿದರು.

ಸಚಿವ ಮಾಂಕಾಳ್ ವೈದ್ಯ ಅವರ ಕುಟುಂಬದವರು ಈ ಸಂದರ್ಭದಲ್ಲಿ ಹಾಜರಿದ್ದರು. ಅಲ್ಲದೇ ಸಾವಿರಾರು ಭಕ್ತರ ಸಮ್ಮುಖದಲ್ಲಿ  ಮಹಾಶಿವರಾತ್ರಿ ಜಾಗರಣೋತ್ಸವ  ನಡೆಸಿದರು.

ಇದನ್ನು ಓದಿ : ವಧುವಿನ ಸ್ನೇಹಿತಗೆ ಹಾರ ಹಾಕಿದ ವರ. ಕೆನ್ನೆಗೆ ಬಾರಿಸಿ ಹೊರ ನಡೆದ ವಧು.

ಮಹಾಶಿವರಾತ್ರಿಗೆ ಮುರ್ಡೇಶ್ವರದಲ್ಲಿ ಎಲ್ಲೆಲ್ಲೂ ಶಿವಮಯ.