ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಶಿರಸಿ (Sirsi) : ಮಗಳು ಅನ್ಯ ಜಾತಿಯ ಹುಡುಗನನ್ನ  ವಿವಾಹವಾಗಿದ್ದಾಳೆನ್ನುವ ಕಾರಣಕ್ಕೆ  ತಂದೆಯೆ ಮಗಳು ಹಾಗೂ ಅಳಿಯನಿಗೆ ಚಾಕು ಇರಿದು ಹಲ್ಲೆ ಮಾಡಿ ಬಳಿಕ ತಾನು ಸಹ ವಿಷ ಸೇವನೆ ಮಾಡಿದ ಘಟನೆ ತಾಲೂಕಿನ ಬದನಗೋಡ ಪಂಚಾಯಿತಿ ವ್ಯಾಪ್ತಿಯ ರಂಗಾಪುರದಲ್ಲಿ ನಡೆದಿದೆ.

ಶಂಖರ ಕಮ್ಮಾರ  ಹಲ್ಲೆ ಮಾಡಿದ ತಂದೆಯಾಗಿದ್ದಾನೆ.  ತನ್ನ ಮಗಳು ಮನೋಜ ಕಮಾಟಿ ಎಂಬುವವರನ್ನ ಮದುವೆಯಾಗಿದ್ದಾಳೆ ಎಂದು ಸಿಟ್ಟಾಗಿದ್ದನು.  ಹೀಗಾಗಿ ಚಾಕು ಇರಿದು ಹಲ್ಲೆ ನಡೆಸಿದ್ದಾನೆ. ಬಳಿಕ ತಾನು ಸಹ  ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ‌ದ್ದಾನೆ.

ಸದ್ಯ ಮಗಳು ಮತ್ತು ಅಳಿಯನ ಜೊತೆ ಶಿರಸಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ‌. ಡಿವಾಯಸ್ಪಿ ಗಣೇಶ ಕೆ ಎಲ್ ಮಾರ್ಗದರ್ಶನದಲ್ಲಿ  ಸಿಪಿಆಯ್ ಶಶಿಕಾಂತ ವರ್ಮಾ ಆಸ್ಪತ್ರೆಗೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಬನವಾಸಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನು ಓದಿ : ಪವಿತ್ರ ಜಲದಿಂದ ಶಿವನಿಗೆ ಅಭಿಷೇಕ ಮಾಡಿದ ಸಚಿವ ಮಾಂಕಾಳ್ ವೈದ್ಯ. ರಾತ್ರಿ ಪೂರ್ತಿ ಜಾಗರಣೆ.

ವಧುವಿನ ಸ್ನೇಹಿತಗೆ ಹಾರ ಹಾಕಿದ ವರ. ಕೆನ್ನೆಗೆ ಬಾರಿಸಿ ಹೊರ ನಡೆದ ವಧು.

ಮಹಾಶಿವರಾತ್ರಿಗೆ ಮುರ್ಡೇಶ್ವರದಲ್ಲಿ ಎಲ್ಲೆಲ್ಲೂ ಶಿವಮಯ.