ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಉತ್ತರಪ್ರದೇಶ(Uttarapradesh) : ಕುಡಿದು ಬಂದ ವರ ಮಹಾಶಯ ವಧುವಿನ ಆತ್ಮೀಯ ಗೆಳತಿಗೆ ಹಾರ ಹಾಕಿದ್ದರಿಂದ ರೊಚ್ಚಿಗೆದ್ದ ವಧು ಕಪಾಳ ಮೋಕ್ಷ(Slapad) ಮಾಡಿದ ಘಟನೆ ಬರೇಲಿಯಲ್ಲಿ ನಡೆದಿದೆ.

21ರ ಹರೆಯದ ವಧು ರಾಧಾದೇವಿ ವರನಿಗೆ ಕಪಾಳಮೋಕ್ಷ ಮಾಡಿ, ಮದುವೆಯನ್ನು ರದ್ದುಪಡಿಸಿ (Marriage Cancel) ಮಂಟಪದಿಂದ ತೆರಳಿದ್ದಾಳೆ. 26 ವರ್ಷದ ವರ ರವೀಂದ್ರಕುಮಾರ್ ಎಡವಟ್ಟು ಮಾಡಿದವ.  ವಧುವಿನ ತಂದೆ ವಿವಾಹಕ್ಕೂ ಮೊದಲು  2.5 ಲಕ್ಷ ಮತ್ತು ನಂತರ 2 ಲಕ್ಷ ನೀಡಿರುವುದಾಗಿ ಹೇಳಿಕೊಂಡರೂ ವರನ ಕಡೆಯವರಿಗೆ ಸಾಕಾಗಲಿಲ್ಲ. ಅಲ್ಲದೇ ವರನು ಬೇರೆಯೊಬ್ಬಳ ಜೊತೆ ಪ್ರೀತಿಯಲ್ಲಿ ಬಿದ್ದ ಕಾರಣ ಕುಡಿದು ಬಂದಿದ್ದಾನೆ.

ವರನು ತಾನು ಪ್ರೀತಿಸುತ್ತಿದ್ದ ಹುಡುಗಿ ಮದುವೆಯಾಗಲು ಬಯಸಿದ್ದನು. ಮದುವೆ ಸ್ಥಳಕ್ಕೆ ಕುಡಿದು ಬಂದ ವರ ಕುಟುಂಬ ಸದಸ್ಯರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಎನ್ನಲಾಗಿದೆ. ಮದುವೆಯ ವಿಧಿವಿಧಾನಗಳ ಮುಂಚೆಯೇ ಸ್ನೇಹಿತರೊಟ್ಟಿಗೆ ಎಣ್ಣೆ ಹೊಡೆದಿದ್ದ ಎನ್ನಲಾಗಿದೆ.

ಬಂದವನೇ ಮದ್ಯದ ಅಮಲಿನಲ್ಲಿ ವರನು ಆಕಸ್ಮಿಕವಾಗಿ ವಧುವಿನ ಆತ್ಮೀಯ ಗೆಳತಿಗೆ ಮಾಲೆ ಹಾಕಿ ಅವಳ ಪಕ್ಕದಲ್ಲಿ ನಿಂತ.  ಇದರಿಂದ ಕೋಪಗೊಂಡ ರಾಧಾದೇವಿ ವರನಿಗೆ ಕಪಾಳಮೋಕ್ಷ (Slapad) ಮಾಡಿ ಕುಮಾರನನ್ನು ಮದುವೆಯಾಗಲು ನಿರಾಕರಿಸಿ ಅಲ್ಲಿಂದ ಹೊರಟೆಬಿಟ್ಟಳು.

ಇದರಿಂದ ಸ್ಥಳದಲ್ಲಿ ಎರಡು ಕುಟುಂಬಗಳ ನಡುವೆ ವಾಗ್ವಾದ ನಡೆದಿದ್ದು, ಇಬ್ಬರೂ ಪರಸ್ಪರ ಕುರ್ಚಿಗಳನ್ನು ಎಸೆದಿದ್ದಾರೆ, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಭಾಯಿಸಲು ಹರಸಾಹಸ ಪಟ್ಟರು. ಮದುವೆಯು ನಿಂತಿತು.

ಮಂಟಪಕ್ಕೆ ಬರುವ ಮೊದಲು ವರನ ಸ್ನೇಹಿತರು ಮದ್ಯ ಖರೀದಿಸಿ ಶ್ರೀಕುಮಾರ್‌ಗೆ ನೀಡಿದ್ದಾರೆ. ಪ್ರಕರಣದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಉದ್ದೇಶಪೂರ್ವಕವಾಗಿ ವಧುವಿನ ಕುಟುಂಬಕ್ಕೆ ಅವಮಾನ ಮಾಡಿ ಶಾಂತಿ ಕದಡಿದ್ದಕ್ಕಾಗಿ ಪೊಲೀಸರು ವರ ಮತ್ತು ಸ್ನೇಹಿತರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ವರದಕ್ಷಿಣೆಗೆ ಒತ್ತಾಯಿಸಿದ ವರನ ವಿರುದ್ಧವೂ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.

ಇದನ್ನು ಓದಿ : ಮಹಾಶಿವರಾತ್ರಿಗೆ ಮುರ್ಡೇಶ್ವರದಲ್ಲಿ ಎಲ್ಲೆಲ್ಲೂ ಶಿವಮಯ.

ಎಚ್ಚರ! ಶಿರಸಿಗೂ ಒಕ್ಕರಿಸಿತು ಮಂಗನ ಕಾಯಿಲೆ.

ಕೇಣಿ ಮತ್ತು ಕಾಸರಕೋಡು ಗ್ರಾಮದಲ್ಲಿ ನಿಷೇದಾಜ್ಞೆ ಮುಂದುವರಿಕೆ

ಪೊಲೀಸ್ ಸರ್ಪಗಾವಲಿನ ನಡುವೆ ಸರ್ವೆ. ನಿಷೇದಾಜ್ಞೆ ನಡುವೆ ನಾಗರಿಕರ ಬೃಹತ್ ಪ್ರತಿಭಟನೆ