ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕಾರವಾರ(Karwar) : ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ಮೇ 12ರಂದು ಉತ್ತರಕನ್ನಡ (Uttarakannada) ಜಿಲ್ಲೆಯ ಕಾರವಾರದಲ್ಲಿ ಮಾಕ್ ಡ್ರಿಲ್ (Karwar Mock Drill) ನಡೆಯಲಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ (DC Lakshmipriya) ಮಾಹಿತಿ ನೀಡಿದ್ದಾರೆ.

ರಾಜ್ಯದ ಮೂರು ಸ್ಥಳಗಳಲ್ಲಿ  ಉತ್ತರ ಕನ್ನಡ ಜಿಲ್ಲೆಯನ್ನ ಕೆಟಗರಿ 2ರಲ್ಲಿ ಸೇರಿಸಿದ್ದಾರೆ. ಹೀಗಾಗಿ ಕಾರವಾರದ ಗ್ರಾಸಿಮ್ ಇಂಡಸ್ಟ್ರೀ(Grasim Industry),  ಅಮದಳ್ಳಿಯ(Amadalli) ಸಿವಿಲಿಯನ್ ಏರಿಯಾ, ಕೈಗಾ(Kaiga) ಅಣು ವಿದ್ಯುತ್ ಸ್ಥಾವರ, ಕಾರವಾರ ಬೀಚ್ಗಳಲ್ಲಿ (Karwar Beach) ಸೋಮವಾರ  ಅಣುಕು ಕಾರ್ಯಾಚರಣೆ(Mock Operation) ನಡೆಯಲಿದೆ.

ಸೋಮವಾರ ನಾಲ್ಕು ಗಂಟೆಯಿಂದ ವಿವಿಧ ಕಡೆಗಳಲ್ಲಿ ಆರು ಆಪರೇಷನ್‌ ನಡೆಯಲಿವೆ. ಇದರಿಂದ ಸಾರ್ವಜನಿಕರು ಗೊಂದಲಕ್ಕೆ ಈಡಾಗಬಾರದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಜನರನ್ನು ಸಂರಕ್ಷಣೆ ಮಾಡುವ ಬಗ್ಗೆ ಅಗ್ನಿಶಾಮಕ ದಳ(Fire Brigade) ಕಂದಾಯ(Revenue) ಹಾಗೂ ಪೊಲೀಸ್ ಇಲಾಖೆ(Police Department) ಭಾಗವಹಿಸಲಿದೆ.
ನೌಕಾನೆಲೆಯ ಅಮದಳ್ಳಿಯಲ್ಲಿ ಅಗ್ನಿ ಅವಘಡ ಆಪರೇಷನ್ ನಡೆಯಲಿದೆ. ಎನ್ಸಿಸಿ(NCC) ಎನ್ಎಸ್ಎಸ್(NSS), ವೈದ್ಯರು, ಅಗ್ನಿಶಾಮಕ ದಳ  ಇರಲಿದೆ.  ಬೈತಕೋಲ್ ನಲ್ಲಿ  ತುರ್ತು ಆಸ್ಪತ್ರೆ ಮಾಡಲಾಗುತ್ತದೆ.  ಪತಂಜಲಿ ಆಸ್ಪತ್ರೆಯನ್ನು ಮಾಕ್ ಡ್ರಿಲ್ ನಲ್ಲಿ ಬಳಕೆ ಮಾಡಲಾಗುತ್ತದೆ.

ಕೈಗಾದ ಘಟಕದ ಒಳಗೆ  ಇನ್ನೊಂದು ಅಣಕು ಕಾರ್ಯಾಚರಣೆ ನಡೆಯಲಿದೆ. ಸಂಜೆ ಆರು ಗಂಟೆ ಸುಮಾರಿಗೆ ಟ್ಯಾಗೋರ್ ಕಡಲ ತೀರದಲ್ಲಿ ಇರುವ ಪ್ರವಾಸಿಗರಿಗೆ ಸೈರನ್ ಆದ ವೇಳೆ ಅವರನ್ನು ರಕ್ಷಣೆ ಮಾಡುವುದು.  ಕರಾವಳಿ ಕಾವಲು ಪಡೆ(CSP), ಪ್ರವಾಸೋದ್ಯಮ ಹಾಗೂ ಪೊಲೀಸ್ ಇಲಾಖೆ‌ ಇರಲಿದೆ. ಅಲ್ಲಿ ಪ್ರವಾಸಿಗರಿಗರ ತರಬೇತಿ ನೀಡಲಾಗುತ್ತದೆ

ಜಿಲ್ಲೆಯಲ್ಲಿ ಡ್ಯಾಂ‌ ಇರುವ ಕಾರಣ ಪ್ರವಾಹ ಬರುವ ಸಾಧ್ಯತೆ ಇದೆ. ಹೀಗಾಗಿ ಹರ್ಟುಗ ಗ್ರಾಮದಲ್ಲಿರುವ ನಿವಾಸಿಗಳನ್ನ  ಸಿದ್ದರದ ಶಾಲೆಗೆ ಸ್ಥಳಾಂತರಿಸಲಾಗುತ್ತದೆ.

ರಾತ್ರಿ 7-30ರ ಸುಮಾರಿಗೆ   ಕಾರವಾರ ನಗರ ಹಾಗೂ ಕೈಗಾ ಟೌನ್ಶಿಪ್ ನಲ್ಲಿ ಬ್ಲಾಕ್ ಔಟ್ ಮಾಡಲಾಗುತ್ತದೆ. ಸೈರನ್ ಆದ ಸಂದರ್ಭದಲ್ಲಿ ನಾಗರಿಕರು ತಮ್ಮ ಮನೆಯ ಕಿಟಕಿ ಬಂದ್ ಮಾಡಿ ಕರ್ಟನ್ ಸರಿಸಿ ಮನೆಯ ಲೈಟ್ ಆಫ್ ಮಾಡಬೇಕು. ವಾಹನ ಸವಾರರು ಸಹ  ವಾಹನಗಳ ಲೈಟ್ ಬಂದ್ ಮಾಡಿ ಸುರಕ್ಷಿತ ಸ್ಥಳ ಸೇರಿಕೊಳ್ಳಬೇಕು. 

ಒಟ್ಟಾರೆ ಯುದ್ಧ(War) ಸನ್ನಿವೇಶ ಸೃಷ್ಟಿಯಾಗುತ್ತಿರುವ ಸಂದರ್ಭದಲ್ಲಿ ಅಣಕು ಕಾರ್ಯಾಚರಣೆ ನಾಗರಿಕರಿಗೆ ಸೂಕ್ತವಾಗಿದ್ದು ಜನತೆ ಸಹಕರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಾರಾಯಣ್ ಎಂ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನು ಓದಿ : ಆಣೆಕಟ್ಟುಗಳಿಗೆ ಭದ್ರತೆ ಕಲ್ಪಿಸಲು ಸರ್ಕಾರ ಆದೇಶ.

ಕಾರವಾರದಲ್ಲಿ ಸ್ವಯಂ ಪ್ರೇರಿತ ಬಂದ್. ಹಿಂದೂ ಕಾರ್ಯಕರ್ತರ ಬೃಹತ್ ಪ್ರತಿಭಟನೆ.