ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news)ಕಾರವಾರ(Karwar): ಕಾಶ್ಮೀರದ ಪಹಲ್ಗಾಮ್(Pehalgam) ಭಯೋತ್ಪಾದಕ ದಾಳಿ(Terror Attack) ಮತ್ತು ಮಂಗಳೂರಿನ(Mangalore) ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿ ಕಾರವಾರದಲ್ಲಿ ಹಿಂದೂ ಸಂಘಟನೆಗಳ ಸಮಾನ ಮನಸ್ಕರ ವೇದಿಕೆ ನೇತೃತ್ವದಲ್ಲಿ ಸ್ವಯಂಪ್ರೇರಿತ ಬಂದ್ ಆಚರಿಸಲಾಯಿತು.
ನಗರದ ಕೋಡಿಬೀರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯಲ್ಲಿ ಮಹಿಳೆಯರು ಸೇರಿದಂತೆ ನೂರಾರು ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಕೇಸರಿಶಾಲು ಧರಿಸಿ ಭಗವಾಧ್ವಜ ಹಿಡಿದ ಕಾರ್ಯಕರ್ತರು ಈ ಹಿಂದೆ ಹತ್ಯೆಯಾಗಿದ್ದ ಪ್ರಶಾಂತ ಪೂಜಾರಿ, ಹರ್ಷ ಹಿಂದೂ, ಶಿವು ಉಪ್ಪಾರ, ಕನ್ನಯ್ಯಲಾಲ್, ರುದ್ರೇಶ್ ಅವರ ಭಾವಚಿತ್ರ ಹಿಡಿದು ಸಾಗಿದರು. ಪ್ರತಿಭಟನೆ ಉದ್ದಕ್ಕೂ ‘ಪಾಕಿಸ್ತಾನ ಮುರ್ದಾಬಾದ್’ ಹಿಂದೂಸ್ಥಾನ್ ಜಿಂದಾಬಾದ್ ಎನ್ನುವ ಘೋಷಣೆ ಕೂಗುತ್ತಾ ಸಾಗಿದರು. ಸುಭಾಷ್ ವೃತ್ತ, ಹೂವಿನ ಚೌಕ, ಕಾಜುಬಾಗ ವೃತ್ತ, ಪಿಕಳೆ ರಸ್ತೆ ಮೂಲಕ ಸಾಗಿದ ಮೆರವಣಿಗೆಯು ಜಿಲ್ಲಾಧಿಕಾರಿ ಕಚೇರಿಯ ಬಳಿ ಕೊನೆಗೊಂಡಿತು.
ಸುಹಾಸ್ ಶೆಟ್ಟಿ(Suhas Shetti) ಹತ್ಯೆ ನಡೆದರೂ ರಾಜ್ಯದ ನಾಯಕರು ಅವರ ಮನೆಗೆ ಭೇಟಿ ನೀಡಿಲ್ಲ. ಇದು ಖಂಡನೀಯ. ಸುಹಾಸ್ ಶೆಟ್ಟಿಯನ್ನು ರೌಡಿ ಶೀಟರ್ ಎನ್ನುವ ನಾಯಕರು ಅವರ ಬಡ ತಂದೆ ತಾಯಿಯನ್ನ ಮಾತನಾಡಿಸಲು ಹೋಗಬೇಕಾಗಿತ್ತು. ಇನ್ನೊಮ್ಮೆ ಜಿಲ್ಲೆಗೆ ಬರುವಾಗ ಸಜ್ಜನರ ಸಹವಾಸ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್ಐಎ ಗೆ ನೀಡಬೇಕು ಹಾಗೂ ಜಿಲ್ಲೆಯಲ್ಲಿರುವ ಪಾಕಿಸ್ಥಾನಿಯರು ಹಾಗೂ ಬಾಂಗ್ಲಾ ಪ್ರಜೆಗಳನ್ನು ಹೊರ ಹಾಕಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ಹಿನ್ನಲೆ ಕಾರವಾರ(Karwar) ನಗರದಲ್ಲಿ ಮೀನು ಮಾರುಕಟ್ಟೆ ಸೇರಿದಂತೆ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ಮೀನು ಮಾರುಕಟ್ಟೆ(Fish Market) ಹಾಗೂ ಹೊಟೇಲುಗಳು ಬಂದ್ ಆಗಿದ್ದವು. ಬ್ಯಾಂಕ್, ಸರಕಾರಿ ಕಚೇರಿಗಳು ತೆರೆದಿದ್ದವು. ಸರ್ಕಾರಿ ಬಸ್ ಓಡಾಡಿದರೆ, ಆಟೋ ಸಂಚಾರ ಸ್ಥಗಿತವಾಗಿತ್ತು.
ಇದೇ ವೇಳೆ ಪಾಕಿಸ್ಥಾನದಲ್ಲಿರುವ ಉಗ್ರ ನೆಲೆಗಳ ಮೇಲೆ ಭಾರತೀಯ ಸೈನಿಕರು ದಾಳಿ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಭಾರತ್ ಮಾತಾಕಿ ಜೈ, ಸೈನಿಕರಿಗೆ ಜಯವಾಗಲಿ ಘೋಷಣೆ ಮೊಳಗಿತು.
ಇದನ್ನು ಓದಿ : ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಉಗ್ರ ಮಸೂದ್ ಅಜರ್ ಕುಟುಂಬ ನಿರ್ನಾಮ.
ಪಾಕ್ ಭಯೋತ್ಪಾದಕ ನೆಲೆ ಮೇಲೆ ವಾಯು ಸೇನೆ ಅಟ್ಯಾಕ್. 100ಕ್ಕೂ ಹೆಚ್ಚು ಉಗ್ರರು ಮಟಾಷ್.