ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news)ನವದೆಹಲಿ (Newdelhi): ಭಾರತದ ಕ್ಷಿಪಣಿ ದಾಳಿಗೆ ಪಾಕಿಸ್ಥಾನ ತತ್ತರಿಸುತ್ತಿದೆ. ಪಾಕಿಸ್ತಾನದ(Pakistan) ಪ್ರಮುಖ ನಗರಗಳಾದ ಕರಾಚಿ(Karachi), ರಾಜಧಾನಿ ಇಸ್ಲಾಮಾಬಾದ್(Islamabad), ಲಾಹೋರ್(Lahore), ರಾವಲ್ಪಿಂಡಿ(Ravalpindi) ತೀವ್ರ ಹಾನಿಗೊಳಗಾಗಿದೆ.
ನೌಕಾಪಡೆಯ ಐಎನ್ಎಸ್ ವಿಕ್ರಾಂತ್(INS Vikrant) ನೇತೃತ್ವದಲ್ಲಿ ಬಾರೀ ಪ್ರಮಾಣದ ದಾಳಿ ನಡೆಸಲಾಗಿದ್ದು ಬಂದರಿನಲ್ಲಿ ಎಲ್ಲಿ ನೋಡಿದರು ಬೆಂಕಿಯೇ ವಾತಾವರಣ. ಐಎನ್ಎಸ್ ವಿಕ್ರಾಂತ್ ಮಾರಕ ದಾಳಿಗೆ ಕರಾಚಿ ಬಂದರು ಸಂಪೂರ್ಣವಾಗಿ ನಾಶಸವಾಗಿದೆ.
ಆರಂಭದಲ್ಲಿ ಭಾರತ ಸೇನೆಯು (Indian Army) ಪಾಕಿಸ್ತಾನದ ಮೇಲೆ ವೈಮಾನಿಕ ದಾಳಿ ಮಾಡಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಸಹ ಜಮ್ಮು(Jammu), ಪಠಾಣ್ಕೋಟ್ (Patanakot) ಮತ್ತು ಉಧಂಪುರದಲ್ಲಿರುವ ಭಾರತದ ಮಿಲಿಟರಿ ಕೇಂದ್ರಗಳ ಮೇಲೆ ಡ್ರೋನ್ಗಳು ಹಾಗೂ ಕ್ಷಿಪಣಿಗಳ ದಾಳಿ ಮಾಡುವ ಯತ್ನ ವಿಫಲವಾಗಿದೆ.
ಭಾರತ ಸಹ ಪ್ರತ್ಯುತ್ತರವಾಗಿ ಲಾಹೋರ್, ಕರಾಚಿ, ರಾವಲ್ಪಿಂಡಿ, ರಾಜಧಾನಿ ಇಸ್ಲಾಮಾಬಾದ್ ಸೇರಿದಂತೆ ಇನ್ನುಳಿದ ನಗರಗಳ ಮೇಲೆ ದಾಳಿ ಮಾಡಿದೆ. ಈ ಮಧ್ಯೆ ಪಾಕಿಸ್ತಾನದ ಡ್ರೋನ್ಗಳನ್ನು, ಕ್ಷಿಪಣಿಗಳನ್ನು ಭಾರತೀಯ ಸೇನೆ ಹೊಡೆದು ಹಾಕಿದೆ. ಇಂಡಿಯಾ ತನ್ನ ಸಾರ್ವಭೌಮತ್ವ ರಕ್ಷಿಣೆ ಮತ್ತು ತನ್ನ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ.
ಇದನ್ನು ಓದಿ : ಕಾರವಾರದ ಆರು ಸ್ಥಳಗಳಲ್ಲಿ ಮೇ 12 ರಂದು ಅಣುಕು ಕಾರ್ಯಾಚರಣೆ : ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ.