ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar): ಕೇಂದ್ರ ಗೃಹ ಸಚಿವಾಲಯದ(Central Home Ministry) ಸೂಚನೆಯ ಮೇರೆಗೆ ಬುಧವಾರ ಮಧ್ಯಾಹ್ನ ಕಾರವಾರ(Karwar) ತಾಲೂಕಿನ ಮಲ್ಲಾಪುರದಲ್ಲಿ(Mallapura) ಮತ್ತು ರಾಯಚೂರಿನ(Rayachuru) ಶಕ್ತಿ ನಗರದಲ್ಲಿ ನಡೆಯಲಿರುವ ಮಾಕ್ ಡ್ರಿಲ್ (Mock Drill) ಮುಂದೂಡಲಾಗಿದೆ.
ಅಗತ್ಯ ಇರುವ ಸರ್ವ ಸಿದ್ದತೆಗಳು ಮುಗಿದ ನಂತರದಲ್ಲಿ ಮುಂದಿನ ವಾರ ಮಾಕ್ ಡ್ರಿಲ್ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಹೇಳಿದ್ದಾರೆ.
ಪಹಲ್ಗಾಮ್(Pehalgam) ಪ್ರಕರಣದ ಹಿನ್ನಲೆಯಲ್ಲಿ ತುರ್ತು ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ನಾಗರೀಕರ ರಕ್ಷಣೆ ಮಾಡುವ ಕುರಿತಂತೆ ಕೇಂದ್ರ ಗೃಹ ಸಚಿವಾಲಯದದಿಂದ ಹಲವು ರಾಜ್ಯಗಳಲ್ಲಿ ಅಣಕು ಕಾರ್ಯಾಚರಣೆ ನಡೆಸಲು ನಿರ್ದೆಶನ ಬಂದಿದೆ. ಅದರಂತೆ ಉತ್ತರಕನ್ನಡ ಜಿಲ್ಲೆಯನ್ನು ಕೆಟಗೆರಿ 2 ರಲ್ಲಿ ಸೇರ್ಪಡೆ ಮಾಡಿದ್ದು, ಜಿಲ್ಲೆಯ ಮಲ್ಲಾಪುರದಲ್ಲಿ ಅಣಕು ಕಾರ್ಯಚರಣೆ ನಡೆಸಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕಾರ್ಯಾಚರಣೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕಿದ್ದು ರಾತ್ರಿ ಸೈರನ್ ಮೊಳಗಿದಾಗ ಎಲ್ಲ ಲೈಟ್ ಬಂದ್ ಮಾಡಿ ಬ್ಲ್ಯಾಕ್ ಔಟ್ ಮಾಡಬೇಕು. ಅಗ್ನಿ ಅವಘಡದಲ್ಲಿ ಜನರನ್ನು ರಕ್ಷಿಸುವ , ಕಡಲತೀರದಿಂದ ಜನರನ್ನು ತೆರವುಗೊಳಿಸುವ ಕಾರ್ಯಾಚರಣೆ ಮಾಡಬೇಕಿದೆ. ಇದಕ್ಕೆಲ್ಲ ಸಿದ್ಧತೆ ನಡೆದಿದ್ದು ಮುಂದಿನ ವಾರ ನಿಗದಿತ ದಿನದಂದು ಮಾಕ್ ಡ್ರಿಲ್ ಮಾಡಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ , ನಾಗರಿಕ ರಕ್ಷಣೆ ಅಣಕು ಕಾರ್ಯಚರಣೆ ಕುರಿತ ಸಭೆ ನಡೆಸಲಾಗಿತ್ತು.
ಜಿಲ್ಲೆಯ ಅತ್ಯಂತ ಉದ್ದವಾದ ಕರಾವಳಿ ತೀರವನ್ನು ಹೊಂದಿರುವುದು ಮಾತ್ರವಲ್ಲದೇ ಅನೇಕ ಸೂಕ್ಷ್ಮ ಪ್ರದೇಶಗಳನ್ನು ಒಳಗೊಂಡಿರುವುದರಿ0ದ ಈ ಪ್ರದೇಶದಲ್ಲಿ ತುರ್ತು ಸಂದರ್ಭದಲ್ಲಿ ನಾಗರೀಕರ ರಕ್ಷಣೆ ಮಾಡುವ ಕುರಿತಂತೆ ಅಣಕು ಅಭ್ಯಾಸ ನಡೆಸಲು , ಸರ್ಕಾರದಿಂದ ಒಂದು ವಾರದ ಒಳಗೆ ನಿಗಧಿತ ದಿನಾಂಕವನ್ನು ನೀಡಲಿದ್ದು , ಅದಕ್ಕಾಗಿ ಈಗಿನಿಂದಲೇ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಜಿಲ್ಲೆಯಲ್ಲಿ ಒಂದು ಕಡೆ ಮಾತ್ರ ಅಣಕು ಕಾರ್ಯಚರಣೆಗೆ ನಿರ್ದೇಶನ ನೀಡಿದ್ದು, ಸುರಕ್ಷಿತ ಸ್ಥಳಕ್ಕೆ ಜನರ ಸ್ಥಳಾಂತರ, ಬೆಂಕಿಯಿಂದ ರಕ್ಷಣೆ ಮಾಡಲು ನಿರ್ದೇಶನವಿದ್ದು, ಜಿಲ್ಲೆಯಲ್ಲಿ ಸಮುದ್ರ ತೀರ ಇರುವುದರಿಂದ ಇಲ್ಲಿನ ಜನರ ರಕ್ಷಣೆಗೆ ಕೂಡಾ ಅಭ್ಯಾಸ ನಡೆಸಲಿದ್ದು, ಆಸ್ಪತ್ರೆಗಳಲ್ಲಿ ಎಲ್ಲಾ ಉಪಕರಣಗಳ ಸಿದ್ದತೆ, ಸೂಕ್ಷ್ಮ ಪ್ರದೇಶಗಳ ಭದ್ರತೆಗೆ ಕೂಡಾ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ಸಂದರ್ಭದಲ್ಲಿ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್, ಉಪ ವಿಭಾಗಾಧಿಕಾರಿ ಕನಿಷ್ಕ, ಎ.ಎಸ್ಪಿ ಜಗದೀಶ್, ಕೃಷ್ಣಮೂರ್ತಿ , ನೌಕಾಪಡೆ, ಕೈಗಾ ಅಣು ವಿದ್ಯುತ್ ಸ್ಥಾವರದ ಅಧಿಕಾರಿಗಳು ಹಾಗೂ ಎಲ್ಲಾ ಪ್ರಮುಖ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.