ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ನವದೆಹಲಿ (Newdelhi): ಅಕ್ರಮ ಗಣಿಗಾರಿಕೆ(Mining) ಕೇಸ್ಗೆ ನಲ್ಲಿ ಕೊಪ್ಪಳ(Koppal) ಜಿಲ್ಲೆಯ ಗಂಗಾವತಿ ಶಾಸಕ(Gamgavati MLA) ಜನಾರ್ದನ ರೆಡ್ಡಿ (Janardhan Reddy) ಅಪರಾಧಿ ಎಂದು ದೆಹಲಿ ಸಿಬಿಐ ನ್ಯಾಯಾಲಯ(Delhi CBI Court) ತೀರ್ಪು ಪ್ರಕಟ ಮಾಡಿದೆ.
ಆಂಧ್ರಪ್ರದೇಶದ(Andrapradesh) ಅನಂತಪುರ ಜಿಲ್ಲೆಯ(Anantapuram) ಓಬಳಾಪುರಂನಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣ ಹಿಂದೆ ರಾಷ್ಟ್ರದ್ಯಾಂತ ಸಂಚಲನ ಸೃಷ್ಟಿಸಿತ್ತು. 13 ವರ್ಷಗಳಿಂದ ಸುದೀರ್ಘ ವಿಚಾರಣೆ ನಡೆದು ಮಂಗಳವಾರ ಸಿಬಿಐ ನ್ಯಾಯಾಲಯವು ತೀರ್ಪು ನೀಡಿದೆ.
ಮಾಜಿ ಸಚಿವ ಮತ್ತು ಹಾಲಿ ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ ಸೇರಿ 8 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 120 ಬಿ, 420, 409, 468 ಮತ್ತು 471 ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(2) ಜೊತೆಗೆ 13(1)(ಡಿ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತೀರ್ಪಿನಿಂದ ಜನಾರ್ದನ ರೆಡ್ಡಿ ಶಾಸಕ ಸ್ಥಾನದಿಂದ ವಜಾ ಆಗುವ ಭೀತಿ ಎದುರಾಗಿದೆ.
ಜನಾರ್ದನ ರೆಡ್ಡಿ (Janardhana Reddi) ಅವರ ಒಎಂಸಿ ಕಂಪನಿಗೆ ಓಬಳಾಪುರಂ ಮತ್ತು ಡಿ. ಹಿರೇಹಾಳದಲ್ಲಿ ಕ್ರಮವಾಗಿ 68.5 ಹೆಕ್ಟೇರ್ ಮತ್ತು 39.5 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ಗುತ್ತಿಗೆ ವಿಚಾರದಲ್ಲಿ ಅಕ್ರಮವಾಗಿದೆ ಎಂಬ ಆರೋಪ ಮಾಡಲಾಗಿತ್ತು. ಅಂದಿನ ಅವಿಭಜಿತ ಆಂಧ್ರ ಪ್ರದೇಶ ಸರ್ಕಾರ ಕಬ್ಬಿಣದ ಅದಿರು ಗಣಿಗಾರಿಕೆ ಗುತ್ತಿಗೆ ನೀಡುವ ವೇಳೆ ಇತರೆ ಎಲ್ಲಾ ಗುತ್ತಿಗೆದಾರರನ್ನು ಬಿಟ್ಟು ಒಎಂಸಿ ಕಂಪನಿಗೆ ಗುತ್ತಿಗೆ ನೀಡಿದೆ ಎಂಬ ಆರೋಪ ಇತ್ತು. ಅಕ್ರಮ ವ್ಯವಹಾರದಿಂದ ಆಂಧ್ರಪ್ರದೇಶ ಸರ್ಕಾರಕ್ಕೆ 884 ಕೋಟಿ ರೂ. ನಷ್ಟ ಎಂದು ಸಿಬಿಐ ತನಿಖೆ ಮಾಡಿ ಬಯಲಿಗೆ ಬಂದಿತ್ತು.
ಪ್ರಕರಣದಲ್ಲಿ ಆರೋಪಿಗಳು?
ಶಾಸಕ ಗಾಲಿ ಜನಾರ್ದನ ರೆಡ್ಡಿ, ನಿವೃತ್ತ ಐಎಎಸ್ ಅಧಿಕಾರಿ ಕೃಪಾನಂದಂ., ತೆಲಂಗಾಣದ ಮಾಜಿ ಸಚಿವೆ ಹಾಗೂ ಹಾಲಿ ಶಾಸಕಿ ಸಬಿತಾ ಇಂದ್ರಾರೆಡ್ಡಿ., 2022ರಲ್ಲಿ ಸೇವೆಯಿಂದ ಬಿಡುಗಡೆಯಾದ ಐಎಎಸ್ ಅಧಿಕಾರಿ ವೈ. ಶ್ರೀಲಕ್ಷ್ಮೀ, ಗಣಿ ಇಲಾಖೆಯ ಮಾಜಿ ಸಹಾಯಕ ನಿರ್ದೇಶಕ ದಿವಂಗತ ಆರ್. ಲಿಂಗಾ ರೆಡ್ಡಿ., ಒಎಂಸಿ ವ್ಯವಸ್ಥಾಪಕ ನಿರ್ದೇಶಕ ಬಿ.ವಿ ಶ್ರೀನಿವಾಸ ರೆಡ್ಡಿ, ಜನಾರ್ದನ ರೆಡ್ಡಿ ಆಪ್ತ ಸಹಾಯಕ ಮೆಫಾಜ್ ಅಲಿ ಖಾನ್ ಮತ್ತು ಗಣಿ ಇಲಾಖೆಯ ಮಾಜಿ ನಿರ್ದೇಶಕ ವಿ ಡಿ ರಾಜಗೋಪಾಲ್ ಪ್ರಕರಣದಲ್ಲಿದ್ದರು.
ಇದನ್ನು ಓದಿ : ಮೇ ಏಳರಂದು ಮಾಕ್ ಡ್ರಿಲ್. ಕಾರವಾರ ಸೇರಿ ರಾಜ್ಯದ ಮೂರು ಕಡೆಗಳಲ್ಲಿ ಯುದ್ಧದ ತಾಲೀಮು.
ಶಾರ್ಟ್ ಸರ್ಕ್ಯೂಟ್ ನಿಂದ ಬ್ಯಾಂಕಿಗೆ ಬೆಂಕಿ. ಲಕ್ಷಾಂತರ ರೂ ವಸ್ತುಗಳು, ದಾಖಲೆಗಳು ಭಸ್ಮ.
ಭಾರತ ಮತ್ತು ಪಾಕ್ ನಡುವೆ ಯುದ್ಧದ ಕಾರ್ಮೋಡ. ಏಳರಂದು ರಾಷ್ಟ್ರದ್ಯಾಂತ ಮಾಕ್ ಡ್ರಿಲ್.