ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ಪತ್ನಿ ಜೊತೆ ಸರ್ಕಾರಿ ಬಸ್ ನಲ್ಲಿ(Government Bus) ತೆರಳುತ್ತಿದ್ದ ಪತಿಯ ಮೇಲೆ ಸಹ ಪ್ರಯಾಣಿಕನೋರ್ವ ಚಾಕುವಿನಿಂದ ಇರಿದು ಕೊಲೆ(Murder) ಮಾಡಿದ ಘಟನೆ ಶಿರಸಿಯಲ್ಲಿ ನಡೆದಿದೆ.

ಸಾಗರ ಮೂಲದ ಗಂಗಾಧರ ಕೊಲೆಯಾದ ದುರ್ದೈವಿ.  ಶಿರಸಿಯ ಪ್ರೀತಮ ಮ್ಯಾನುವಲ್ ಡಿಸೋಜಾ ಎಂಬಾತನೆ ಕೊಲೆ(Murder) ಮಾಡಿ ಪರಾರಿಯಾದವ ಎನ್ನಲಾಗಿದೆ.

ಕಳೆದ ಆರು ತಿಂಗಳ ಹಿಂದಷ್ಟೆ ಸಾಗರದ(Sagar) ಗಂಗಾಧರ  ಶಿರಸಿಯ(Sirsi) ಪೂಜಾ ಅವರನ್ನ ವಿವಾಹವಾಗಿದ್ದರು. ಶನಿವಾರ ಪೂಜಾಳ ಅತ್ತೆ ಮನೆ ಅಚನಳ್ಳಿಯಲ್ಲಿ ಧಾರ್ಮಿಕ ಕಾರ್ಯಕ್ರಮ ಇದ್ದಿದರಿಂದ ಆಗಮಿಸಿದ್ದರು. ಸಂಜೆ 7.30  ರ ಸುಮಾರಿಗೆ ಹೊಸ ಬಸ್ ನಿಲ್ದಾಣಕ್ಕೆ ಆಗಮಿಸಿದ ದಂಪತಿ ಅಂಕೋಲಾದಿಂದ  ಬೆಂಗಳೂರಿಗೆ ತೆರಳುವ ಬಸ್ ಹತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರೀತಮ ಕೂಡಾ ಬಸ್ ಹತ್ತಿದ್ದಾನೆ. ಇನ್ನೇನು ಬಸ್ ಸರಕಾರಿ ಆಸ್ಪತ್ರೆ ಹತ್ತಿರ ಬರುತ್ತಿದ್ದಂತೆ ಪ್ರೀತಮ ಚಾಕುವಿನಿಂದ ಗಂಗಾಧರನ ಎದೆಗೆ ಇರಿದು ಕೊಲೆ ಮಾಡಿದ ನಂತರ ಬಸ್ ನಿಂದ ಹಾರಿ ಪರಾರಿಯಾಗಿದ್ದಾನೆ. ಈ ವೇಳೆ ಪೂಜಾಳ ಕೈಯಿಗೂ ಗಾಯವಾಗಿದೆ.

ಸ್ಥಳಕ್ಕೆ ಡಿವಾಯಸ್ಪಿ ಗಣೇಶ ಕೆ ಎಲ್ ಮತ್ತು ಸಿಪಿಆಯ್ ಶಶಿಕಾಂತ ವರ್ಮಾ ಮತ್ತು ಪಿಎಸ್ಆಯ್ ನಾಗಪ್ಪ ಬಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.  ಆರೋಪಿಯ ಬಂಧನಕ್ಕೆ ತಂಡ ರಚಿಸಿದ್ದಾರೆ. ಶಿರಸಿ ನಗರ ಠಾಣಾ (Sirsi Town Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನು ಓದಿ : ಏಪ್ರಿಲ್ 12ರಿಂದ ಕದಂಬೋತ್ಸವ. ಬನವಾಸಿಯಲ್ಲಿಯೇ ಪಂಪ ಪ್ರಶಸ್ತಿ ಪ್ರದಾನ.

ಗೋ ಕಳೆದುಕೊಂಡ ಕುಟುಂಬಕ್ಕೆ ಪರಮಾತ್ಮನ ರೂಪದಲ್ಲಿ ಬಂದು ಆಕಳು ಕರು ನೀಡಿದ ಮಾಸ್ತಪ್ಪ ನಾಯ್ಕ