ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಹತ್ಯೆಗೈದ ಆರೋಪಿಯನ್ನ ಶಿರಸಿ ಪೊಲೀಸರು ಬಂಧಿಸಿದ್ದಾರೆ.
ಶಿರಸಿಯ ಕೋಟೆಗಲ್ಲಿ ನಿವಾಸಿ ಪ್ರೀತಮ್ ಮ್ಯಾನುವಲ್ ಡಿಸೋಜಾ ಬಂಧಿತ ಆರೋಪಿ. ಶನಿವಾರ ಸಂಜೆ ಅಂಕೋಲಾದಿಂದ ಶಿರಸಿ ಮಾರ್ಗವಾಗಿ ಬೆಂಗಳೂರಿಗೆ ತೆರಳುವ ಸರ್ಕಾರಿ ಬಸ್ ಏರಿದ ಈತ ಸಾಗರ ಮೂಲದ ಗಂಗಾಧರ ಎಂಬಾತನನ್ನ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದ. ಶಿರಸಿ ಪೊಲೀಸರು ಆರೋಪಿಗಾಗಿ ಶೋಧ ನಡೆಸಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರು ತಿಂಗಳ ಹಿಂದೆ ಸಾಗರದ(Sagar) ಗಂಗಾಧರ ಶಿರಸಿಯ(Sirsi) ಪೂಜಾಳನ್ನ ಮದುವೆಯಾಗಿದ್ದ. ಶನಿವಾರ ಪೂಜಾಳ ಅತ್ತೆ ಮನೆ ಅಚನಳ್ಳಿಯಲ್ಲಿ ಧಾರ್ಮಿಕ ಕಾರ್ಯಕ್ರಮ ಇದ್ದಿದರಿಂದ ಪತಿ ಪತ್ನಿ ಆಗಮಿಸಿದ್ದರು. ಸಂಜೆ 7.30 ರ ಸುಮಾರಿಗೆ ಶಿರಸಿಯ ಹೊಸ ಬಸ್ ನಿಲ್ದಾಣಕ್ಕೆ(Sirsi New Bustand) ಆಗಮಿಸಿದ ದಂಪತಿ ಅಂಕೋಲಾದಿಂದ ಬೆಂಗಳೂರಿಗೆ ತೆರಳುವ ಬಸ್ ಹತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರೀತಮ ಕೂಡಾ ಬಸ್ ಹತ್ತಿದ್ದಾನೆ. ಇನ್ನೇನು ಬಸ್ ಸರಕಾರಿ ಆಸ್ಪತ್ರೆ ಹತ್ತಿರ ಬರುತ್ತಿದ್ದಂತೆ ಪ್ರೀತಮ ಚಾಕುವಿನಿಂದ ಗಂಗಾಧರನ ಎದೆಗೆ ಇರಿದು ಕೊಲೆ ಮಾಡಿದ ಹಾರಿ ಪರಾರಿಯಾಗಿದ್ದಾನೆ.
ಕೊಲೆಯ ಹಿಂದೆ ಪ್ರೇಮ ಪ್ರಕರಣದ ಹಿನ್ನಲೆ ಇದೆಯೆನ್ನಲಾಗಿದೆ. ಪ್ರೀತಮ್ ಕಳೆದ ಸುಮಾರು 10 ವರ್ಷಗಳಿಂದ ಗಂಗಾಧರ ವರಿಸಿದ್ದ ಹುಡುಗಿಯನ್ನ ಲವ್(Love) ಮಾಡಿದ್ದ. ಬಳಿಕ ಆಕೆ ಉದ್ಯೋಗಕ್ಕಾಗಿ ಬೆಂಗಳೂರು(Bangaluru) ಸೇರಿಕೊಂಡಿದ್ದಳು. ಅಲ್ಲಿಯೇ ಆರು ತಿಂಗಳ ಹಿಂದೆ ಗಂಗಾಧರನನ್ನ ಪ್ರೀತಿಸಿಯೇ ಮದುವೆಯಾಗಿದ್ದಳು ಎನ್ನಲಾಗುತ್ತಿದೆ. ತಾನು ಪ್ರೀತಿಸಿದ ಹುಡುಗಿಯನ್ನ ಬೇರೆಯವನು ಮದುವೆಯಾಗಿದ್ದು ಪ್ರೀತಮ್ ನ ಪಿತ್ತ ನೆತ್ತಿಗೇರಿತ್ತು. ಈ ಕಾರಣದಿಂದಲೇ ಗಂಗಾಧರನನ್ನ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.
ಆದರೆ ಅವರು ಶಿರಸಿಗೆ(Sirsi) ಬಂದಿರೋದು ಆರೋಪಿಗೆ ಹೇಗೆ ಗೊತ್ತಾಯಿತು. ಆತನಿಗೆ ಮಾಹಿತಿ ನೀಡಿದವರಾರು ಎಂಬುದರ ವಿಚಾರಣೆಯನ್ನ ಪೊಲೀಸರು ನಡೆಸುತ್ತಿದ್ದಾರೆ. ಗಂಗಾಧರಳನ್ನ ಮದುವೆಯಾದ ಪೂಜಾಳ ವಿಚಾರಣೆ ನಡೆಸಿದ ಬಳಿಕ ಪ್ರೀತಿ, ಮದುವೆಯ ಸಂಪೂರ್ಣ ಹಕಿಕತ್ ಗೊತ್ತಾಗಲಿದೆ.
ಇದನ್ನು ಓದಿ : ಬೆಂಗಳೂರು ಬಸ್ ನಲ್ಲಿ ಪ್ರಯಾಣಿಕನ ಕೊ ಮಾಡಿ ಆರೋಪಿ ಪರಾರಿ.
ಏಪ್ರಿಲ್ 12ರಿಂದ ಕದಂಬೋತ್ಸವ. ಬನವಾಸಿಯಲ್ಲಿಯೇ ಪಂಪ ಪ್ರಶಸ್ತಿ ಪ್ರದಾನ.
ಗೋ ಕಳೆದುಕೊಂಡ ಕುಟುಂಬಕ್ಕೆ ಪರಮಾತ್ಮನ ರೂಪದಲ್ಲಿ ಬಂದು ಆಕಳು ಕರು ನೀಡಿದ ಮಾಸ್ತಪ್ಪ ನಾಯ್ಕ.