ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal):  ಗ್ರಾಮಿಣ ಠಾಣೆ ಪೊಲೀಸರು ನೂಜ್ ಗ್ರಾಮದ ಅರಣ್ಯ ಪ್ರದೇಶದಲ್ಲಿ ದಾಳಿ(Raid) ಮಾಡಿ ಇಸ್ಪಿಟ್ ಆಡುತ್ತಿದ್ದ ಹಲವರನ್ನು ಬಂಧಿಸಿದ್ದಾರೆ.

  ಹಣವನ್ನು ಪಂಥವಾಗಿ ಕಟ್ಟಿ ಅಂದರ್ ಬಾಹರ್ ಜೂಜಾಟ ಆಡುತ್ತಿರುವ  ಮಾಹಿತಿ ಪಡೆದ ಭಟ್ಕಳ ಡಿವೈಎಸ್ಪಿ ಮಹೇಶ ಎಮ್. ಕೆ. , ಸಿಪಿಐ ಮಂಜುನಾಥ ಎ. ಲಿಂಗಾರೆಡ್ಡಿ  ಮಾರ್ಗದರ್ಶನದಲ್ಲಿ   ಪಿ.ಎಸ್.ಐ ಭರಮಪ್ಪ ಬೆಳಗಲಿ . ಅವರು ನೂಜ್ ಗ್ರಾಮದ ಅರಣ್ಯ ಪ್ರದೇಶದಲ್ಲಿ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ  ಗೋಪಾಲ ತಂದೆ ಲಕ್ಷ್ಮಣ ಖಾರ್ವಿ  (42)  ಉಪ್ಪುಂದ, ಬೈಂದೂರು, ನಾಗರಾಜ ತಂದೆ ನಾರಾಯಣ ನಾಯ್ಕ (34) ಕೊಳೆಗೇರಿ, ಉತ್ತರಕೊಪ್ಪ, ಜಬ್ಬಾರ ತಂದೆ ಅಬ್ದುಲ್ ಖಾದರ ಸಾಬ (33) ರವೀಂದ್ರ ಸಿದ್ದಾಪುರ ವಶಕ್ಕೆ ಪಡೆದುಕೊಂಡಿದ್ದಾರೆ.  ಇನ್ನೂ ಉಳಿದ ಆರೋಪಿತರಾದ ಜಯಂತ @ ಕೋಳಿ ಜಯಂತ ತಂದೆ ನಾರಾಯಣ ನಾಯ್ಕ ವಾಸ: ಮುರ್ಡೇಶ್ವರ, ಭಟ್ಕಳ,  ಬಾಬು @ ಕೋಳಿ ಬಾಬು ತಂದೆ ಅಣ್ಣಪ್ಪ ನಾಯ್ಕ ವಾಸ: ಕೋಟೆ ಬಾಗಿಲು, ಶಿರಾಲಿ, ಭಟ್ಕಳ, ದತ್ತಾ ತಂದೆ ಮಾದೇವ ನಾಯ್ಕ ವಾಸ: ಕೋಟೆಬಾಗಿಲು, ಶಿರಾಲಿ, ಭಟ್ಕಳ, ಇರ್ಫಾನ್ ಸಾ: ಮುರ್ಡೇಶ್ವರ , ಕುಮಾರ ಗೌಡ ವಾಸ: ಉತ್ತರಕೊಪ್ಪ ರಾಜೇಶ ವಾಸ: ಬೈಂದೂರು ,  ಹಾಗೂ ಇನ್ನೂ ಐದಾರು ಜನರು ಓಡಿ ಹೋಗಿದ್ದಾರೆ.

ದಾಳಿಯ ಬೇಳೆ 9,700/-ರೂಪಾಯಿಗಳ ನಗದು ಹಣ ಮತ್ತು 8,075 ರೂಪಾಯಿಗಳ ಮೌಲ್ಯದ 10 ಸ್ವತ್ತಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಭಟ್ಕಳ ಗ್ರಾಮಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾಳಿಯಲ್ಲಿ  ಸಿಬ್ಬಂದಿಗಳಾದ ಶಿವಾನಂದಪ್ಪ ವಡ್ಡರ,  ಶ್ರೀಪಾದ ನಾಯ್ಕ,  ಬಾಗಪ್ಪಕಡಕಲ್,  ವೀರಣ್ಣ ಬಳ್ಳಾರಿ, ತನಿಖಾ ಸಹಾಯಕರಾದ ಮದಾರಸಾಬ ಚಿಕ್ಕೇರಿ,  ಮಂಜುನಾಥ ಖಾರ್ವಿ, ಜೀಪ್ ಚಾಲಕ  ಸಂತೋಷ ನಾಯ್ಕ ಇದ್ದರು.

ಇದನ್ನು ಓದಿ : ರಾಜ್ಯ ಕಸಾಪ ಅಧ್ಯಕ್ಷ ಮಹೇಶ ಜೋಶಿ ಸವಲತ್ತು ವಾಪಾಸ್.

ಇಂದಿನಿಂದ ಆಳ ಸಮುದ್ರ ಮೀನುಗಾರಿಕೆ ನಿಷೇಧ. ಸರ್ಕಾರದ ಆದೇಶ.