ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಅಯೋಧ್ಯೆ(Ayodhye) : ವಿವಾಹ ಕಾರ್ಯ  ಮುಗಿಸಿ ರಾತ್ರಿ ರೂಮ್ ಗೆ ತೆರಳಿದ್ದ ನವವಧುವರರು  ಶವವಾಗಿ ಪತ್ತೆಯಾದ ಘಟನೆ ಅಯೋಧ್ಯೆ(Ayodhye) ಕಂಟೋನ್ಮಂಟ್ ಪೊಲೀಸ್ ಠಾಣೆ(Cantonment Police Station) ವ್ಯಾಪ್ತಿಯ ಸಾದತ್ ಗಂಜ್ ಪ್ರದೇಶದಲ್ಲಿ ನಡೆದಿದೆ.

ಪ್ರದೀಪ್ ಮತ್ತು ಶಿವಾನಿ ಅವರ ಮದುವೆ ಶನಿವಾರ ನಡೆದಿತ್ತು.  ಮದುವೆಯ ದಿನ ವಿಧಿ ವಿಧಾನಗಳು ನಡೆದು ಬಳಿಕ ಅಪರಾಹ್ನ ದಿಬ್ಬಣವು ವರನ ಮನೆಗೆ ಮರಳಿತ್ತು.  ರಾತ್ರಿ ಮಧು ಮಕ್ಕಳು ಕೋಣೆಗೆ ತೆರಳಿದ್ದರು. ಮಾರನೇ ದಿನ ಬೆಳಿಗ್ಗೆ ದಂಪತಿ ಕೋಣೆಯಿಂದ ಹೊರ ಬರದ ಕಾರಣ ಕುಟುಂಬಸ್ಥರು ಕೊಣೆಯ ಬಾಗಿಲು ಬಡಿದಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಬಾಗಿಲು ಒಡೆದು ಒಳಗೆ ನೋಡಿದಾಗ ಶಿವಾನಿಯ ಮೃತದೇಹವು ಹಾಸಿಗೆಯಲ್ಲಿ ಕಂಡು ಬಂದಿತ್ತು ಮತ್ತು ಪ್ರದೀಪ್ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಕೊಠಡಿ ಒಳಗಿನಿಂದ ಲಾಕ್ ಆಗಿರುವುದರಿಂದ ವರನು ವಧುವನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಂತೆ ಕಂಡುಬರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ : ನಾಟಕದಲ್ಲಿ ನಡೀತು ರಿಯಲ್ ಘಟನೆ.  ಮಗನ ಬಡವನ ಪಾತ್ರಕ್ಕೆ ವೇದಿಕೆಯಲ್ಲಿಯೇ ಗೋಳೋ ಎಂದ ತಂದೆ.

ಭಟ್ಕಳದಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ. ಪೊಲೀಸರ ಕಾರ್ಯಾಚರಣೆ.