ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ (Karwar): ಇವತ್ತಿನ ಮೊಬೈಲ್ ಯುಗದಲ್ಲಿ ಊರು ಕೇರಿಗಳಲ್ಲಿ ನಡೆಯುತ್ತಿರುವ  ನಾಟಕಗಳು ಮರೆಯಾಗುತ್ತಿದೆ. ಆದರೆ ಹಿಂದಿನಿಂದ ನಾಟಕಗಳ(Drama) ತವರೆನಿಸಿದ್ದ  ರಾಜ್ಯದ ಗಡಿ ಭಾಗ ಕಾರವಾರದಲ್ಲಿ(Karwar)  ಇಂದಿಗೂ ನಾಟಕಗಳು ಪ್ರದರ್ಶನಗೊಳ್ಳುತ್ತಿದೆ. ಇಲ್ಲಿನ ನೂರಾರು ಸಂಖ್ಯೆಯ ನಾಟಕಕಾರರು ಇಂದಿಗೂ ತಮ್ಮ ಕಲಾ ನೈಪುಣ್ಯತೆಯನ್ನ ಕಾಪಾಡಿಕೊಂಡು ಬರುತ್ತಿದ್ದಾರೆ.

ಕಾರವಾರ(Karwar) ತಾಲೂಕಿನ ಕಿನ್ನರ ಗ್ರಾಮದಲ್ಲಿ(Kinner) ಜರುಗಿದ ನಾಟಕವೊಂದರಲ್ಲಿ ಬಡವನ ಪಾತ್ರ ಮಾಡಿದ ಮಗನನ್ನ ತಬ್ಬಿ ಕಣ್ಣೀರು ಸುರಿಸಿದ ಘಟನೆ ನಡೆದಿದೆ.

ಕಿನ್ನರ ಗ್ರಾಮದ ದಿಗಾಳಿಯಲ್ಲಿ ಬ್ರಹ್ಮ ದೇವರ(Brahma Deva) ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಶ್ರೀ ಬ್ರಹ್ಮದೇವ ನವ ತರುಣ ನಾಟ್ಯ ಮಂಡಳಿ ಅವರು  ಪ್ರದರ್ಶಿಸಿದ “ಗುರಿ ಸಾಧಿಸಿದ ಮಗಳಿಗೆ ಗೋರಿ ಕಟ್ಟಿದ ಅಳಿಯ”  ನಾಟಕದಲ್ಲಿ ಕಲಾವಿದ ಗಣೇಶ ಶಂಕರ್ ನಾಯ್ಕ ಎಂಬುವವರು ಬಡವನ ಪಾತ್ರ ಮಾಡಿದ್ದರು.   ನಾಟಕದಲ್ಲಿ ಶಂಕರ ಬಡವನ ಪಾತ್ರವೊಂದಕ್ಕೆ ಜೀವ ತುಂಬಿದ್ದರು. 

ದೃಶ್ಯದಲ್ಲಿ  ಮನೋಜ್ಞ ವಾಗಿ ಅಭಿನಯಿಸಿದ್ದರಿಂದ  ನೆರೆದ ಪ್ರೇಕ್ಷಕರ ಕಣ್ಣಲ್ಲಿ ನೀರು ಬರುತಿತ್ತು. ಕಣ್ಣೀರು ಸುರಿಸುತ್ತಲೆ ಮಹಿಳೆಯರು, ಪುರುಷರು ಹಣ ನೀಡುತ್ತಿದ್ದರು.   ವೇದಿಕೆಯಲ್ಲಿ ಮಗನ ದೀನ ಪರಿಸ್ಥಿತಿಯನ್ನ ನೋಡಲಾರದೆ ತಂದೆ ವೇದಿಕೆಯ ಇನ್ನೊಂದು ಬದಿಯಿಂದ ಓಡಿ ಬಂದು ಮಗನನ್ನ ಅಪ್ಪಿಕೊಂಡಿದ್ದಾರೆ.

ಆಗ ನಾಟಕದ ಸಂಘಟಕರು ಓಡಿ ಬಂದು ತಂದೆಯನ್ನ ಈಚೆಗೆ ಕರೆತಂದು ಸಮಾಧಾನಿಸಿದ್ದಾರೆ.  ಏನೇ ಇರಲಿ, ತಮ್ಮ ಮಕ್ಕಳಿಗೆ ಬೇಡುವ ಪರಿಸ್ಥಿತಿ ಬರಬಾರದು ಎಂದು ಬಹುತೇಕ ಪಾಲಕರು ಅಂದುಕೊಳ್ತಾರೆ. ಆದರೆ ನಾಟಕದಲ್ಲಿ ಮಗ ಅಭಿನಯಿಸಿದ ಪಾತ್ರಕ್ಕೆ ಸಾಕಿ ಸಲುಹಿದ ಕರುಳು ಮಿಡಿದಿರುವುದು ನಿಜಕ್ಕೂ ಇವತ್ತಿನ ಸಮಾಜಕ್ಕೆ ಸಂದೇಶವಾಗಿದೆ.

ಇದನ್ನು ಓದಿ : ಭಟ್ಕಳದಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ. ಪೊಲೀಸರ ಕಾರ್ಯಾಚರಣೆ.

ತೂಕ ಇಳಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವತಿ.

ಕುಂಭ ಮೇಳದಲ್ಲಿ 30 ಕೋಟಿ ಗಳಿಸಿದ ನಾವಿಕ ಕುಟುಂಬಕ್ಕೆ ಟ್ಯಾಕ್ಸ್ ಸಂಕಷ್