ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಸಹಕಾರ ಬ್ಯಾಂಕ್ (ಕೆ.ಡಿ.ಸಿ.ಸಿ)(KDCC BANK) 105 ವರ್ಷಗಳ ಇತಿಹಾಸದಲ್ಲಿ ಪ್ರಥಮ ಬಾರಿ ಮಹಿಳಾ ಅಭ್ಯರ್ಥಿಯಾಗಿ(Women Candidate)   ಸಹಕಾರಿ ಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಿರುವ ಸರಸ್ವತಿ ಎನ್. ರವಿ ಅವರು  ‘ಅರ್ಬನ್ ಬ್ಯಾಂಕು ಹಾಗೂ ಕೃಷಿಯೇತರ ಸಹಕಾರಿ ಸಂಘಗಳ ಮತಕ್ಷೇತ್ರ’ದಿಂದ ಅಧಿಕೃತವಾಗಿ ನಾಮಪತ್ರ(Nomination) ಸಲ್ಲಿಸಿದ್ದಾರೆ.

ಬುಧವಾರ ಮುಂಜಾನೆ ಶ್ರೀ ಮಾರಿಕಾಂಬೆಗೆ (Shri Marikambe) ಪೂಜೆ ಸಲ್ಲಿಸಿ ತಮ್ಮ ನೂರಾರು ಸಂಖ್ಯೆಯ ಅಭಿಮಾನಿಗಳೊಂದಿಗೆ ಟಿ.ಆರ್.ಸಿ. ಬ್ಯಾಂಕ್ ಎದುರಿನಿಂದ ಮೆರವಣಿಗೆಯ ಮೂಲಕ ಕೆ.ಡಿ.ಸಿ.ಸಿ. ಬ್ಯಾಂಕ್(KDCC BANK) ಆವಾರಕ್ಕೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಆ ಮೂಲಕ ಚುನಾವಣೆಯಿಂದ ಹಿಂದೆ ಸರಿಯುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ನಾಮಪತ್ರ ಸಲ್ಲಿಸಿದ ಬಳಿಕ  ಮಾತನಾಡಿದ ಸರಸ್ವತಿ,  ನನ್ನ ಸ್ಫರ್ಧೆ ಸಹಕಾರಿ ಕ್ಷೇತ್ರದಲ್ಲಿ ಮಹಿಳಾ ಪ್ರತಿನಿಧ್ಯಕ್ಕಾಗಿಯೇ ವಿನಃ ಯಾವುದೇ ದುರುದ್ದೇಶಕ್ಕಲ್ಲ. ಹಲವಾರು ಸಹಕಾರಿ ಸಂಸ್ಥೆಗಳು ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕಿನ(KDCC BANK) ಮಧ್ಯೆ ಸಾಕಷ್ಟು ಅಂತರವಿರುವುದರಿಂದ ಇಂದಿಗೂ ಹಲವಾರು ಸಹಕಾರಿಗಳಿಗೆ ಬ್ಯಾಂಕಿನ ಸೌಲಭ್ಯ ಸಿಗದೇ ಇರುವುದು ವಿಷಾದನೀಯ. ಆರ್ಥಿಕವಾಗಿ ಹಿಂದುಳಿದ ಸಹಕಾರಿ ಸಂಸ್ಥೆಗಳಿಗೆ ಕೆ.ಡಿ.ಸಿ.ಸಿ. ಬ್ಯಾಂಕಿನ ಸೌಲಭ್ಯ ಸಿಗುವಂತೆ ಮಾಡುವುದು ಆಯಾ ಕ್ಷೇತ್ರದ ನಿರ್ದೇಶಕರ ಜವಾಬ್ದಾರಿಯಾಗಿರುತ್ತದೆ. ನಾನು ಆಯ್ಕೆಯಾದಲ್ಲಿ ಸಹಕಾರಿಗಳ ಪ್ರತಿನಿಧಿಯಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷರು ಎ.ಜಿ.ಇ., ಇನ್ನರ್ವ್ಹೀಲ್ ಕ್ಲಬ್‍ನ ಅಧ್ಯಕ್ಷರು ಕಾರ್ಯದರ್ಶಿಗಳು ಸದಸ್ಯರು ಹಾಗೂ ಸರಸ್ವತಿ ಎನ್. ರವಿಯವರ ಅಭಿಮಾನಿಗಳು, ಕಾರ್ಯಕರ್ತರು, ಎಸ್.ಎಮ್.ಎಸ್., ವಿವಿಧ ಸೌಹಾರ್ದ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ನೂರಾರು ಜನ ಹಾಜರಿದ್ದರು.

ಇದನ್ನು ಓದಿ : ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ. ಭಟ್ಕಳ ಆಹಾರ ಅಧಿಕಾರಿಗಳ ಪೊಲೀಸರ ದಾಳಿ.

ಭಟ್ಕಳದಲ್ಲಿ ಯುವಕರ ಮಾರಾಮಾರಿ

ಪಿಗ್ಮಿ‌ಸಂಗ್ರಹಕಾರರ ಬಿಪಿಎಲ್ ಕಾರ್ಡ್ ರದ್ದು ಮಾಡದಂತೆ ಮನವಿ.