ಕುಮಟಾ : ರಾಷ್ಟೀಯ ಹೆದ್ದಾರಿಯಲ್ಲಿದ್ದ ದನ  ತಪ್ಪಿಸುವ ಯತ್ನದಲ್ಲಿ ಕಾರೊಂದು ಬೈಕ್ ಗೆ ಢಿಕ್ಕಿ ಹೊಡೆದ ಘಟನೆ ಕುಮಟಾ ತಾಲೂಕಿನ ಮಿರ್ಜಾನ್ ಬಳಿ ಸಂಭವಿಸಿದೆ.

ಘಟನೆಯಲ್ಲಿ ಅದೃಷ್ಟವಶಾತ್ ಬೈಕ್ ಸವಾರರು ಬಚಾವ್ ಆಗಿದ್ದಾರೆ. ಹೊನ್ನಾವರ ಹಡಿನಬಾಳದ ಇಬ್ಬರು ಮಿರ್ಜಾನ್ ಬಂಡಿಹಬ್ಬಕ್ಕಾಗಿ ಸಂಬಂಧಿಕರ ಮನೆಗೆ ಬಂದಿದ್ದರು. ಇಂದು ರಾತ್ರಿ ತಮ್ಮ ಬೈಕ್ ನ್ನ ಹೆದ್ದಾರಿ ಬದಿಯಲ್ಲಿಟ್ಟು ಸ್ವಲ್ಪ ದೂರದಲ್ಲಿ ನಿಂತು ಮಾತನಾಡುತ್ತಿದ್ದರು. ಈ ವೇಳೆ  ಗೋಕರ್ಣ ಕಡೆಯಿಂದ ಕುಮಟಾ ಕಡೆಗೆ  ಕಾರು ತೆರಳುತಿತ್ತು. ಹೆದ್ದಾರಿಯಲ್ಲಿ ದನವೊಂದು ಅಡ್ಡ ಬಂದಿದ್ದರಿಂದ ಚಾಲಕ ತಪ್ಪಿಸುವ ಭರದಲ್ಲಿ ಬದಿಗೆ ನಿಂತ ಬೈಕ್ ಗೆ ಡಿಕ್ಕಿ ಹೊಡೆದು ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ.

ಕಾರು ಬೈಂದೂರು ಕಡೆಯವರು ಎಂದು ಹೇಳಲಾಗಿದೆ. ಬೈಕ್ ಜಖಂ ಆದ ನಷ್ಟಭರಿಸುವ ಭರವಸೆ ನೀಡಿದ್ದರಿಂದ ದೂರು ದಾಖಲಾಗಿಲ್ಲ.