ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ(Honnavar) : ರಾಜ್ಯವನ್ನ ಬೆಚ್ಚಿ ಬೀಳಿಸಿದ  ಸಾಲ್ಗೊಡ  ಕೊಂಡಾಕುಳಿಯಲ್ಲಿ(Salkodu kondakuli) ದನಗಳ ಕಳ್ಳತನ ಮಾಡಿ, ವಧೆ ಮಾಡಿದ್ದ ಪ್ರಕರಣದಲ್ಲಿ ಓರ್ವನನ್ನ ಪೊಲೀಸರು ಬಂಧಿಸಿದ್ದಾರೆ(Arrested).

ತೌಫಿಕ್ ಅಹಮ್ಮದ್ ಜಿದ್ದಾ (41) ಬಂಧಿತ ಆರೋಪಿ. ಚಾಲಕ ವೃತ್ತಿ ಮಾಡುತ್ತಿರುವ ಈತ ಹೊನ್ನಾವರದ ವಲ್ಕಿಯ ನಿವಾಸಿ(Honnavar Valki Native). ಈತ  ಕೃತ್ಯ ನಡೆದ ಸ್ಥಳದಲ್ಲಿ ಇತರ ಆರೋಪಿಗಳೊಂದಿಗೆ ಕೃತ್ಯದಲ್ಲಿ ಸಹಕರಿಸಿ.  ತನ್ನ ಬೈಕ್‌ನಲ್ಲಿ ಮಾಂಸದ ವಿಲೇವಾರಿಗೆ ಸಹಕರಿಸಿದ್ದ. ಜನವರಿ 19ರಂದು ಸಾಲ್ಕೋಡು ಗ್ರಾಮದ ಕೊಂಡಾಕುಳಿಯಲ್ಲಿ ಕೃಷ್ಣಾ ಆಚಾರಿ ಎಂಬುವವರ ಗರ್ಭ ಧರಿಸಿದ ಹಸುವನ್ನ ಹತ್ಯೆ(Cow Killed) ಮಾಡಿದ್ದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಾರಾಯಣ ಎಮ್ ನಿರ್ದೇಶನದ ಮೇರೆಗೆ ಆರೋಪಿಗಳ ಪತ್ತೆಗೆ ಶೋಧ ನಡೆದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಮ್. ಜಗದೀಶ್, ಭಟ್ಕಳ ಡಿವೈಎಸ್ಪಿ  ಮಹೇಶ ಕೆ ಅ ವರ ಮಾರ್ಗದರ್ಶನದಲ್ಲಿ ಹೊನ್ನಾವರ ಸಿಪಿಐ ಸಿದ್ದರಾಮೇಶ್ವರ, ಎಸ್. ಭಟ್ಕಳ ಗ್ರಾಮೀಣ ಸಿಪಿಐ ಸಂತೋಷ ಕಾಯ್ಕಿಣಿ, ಹೊನ್ನಾವರ ಪಿಎಸ್ಐ ಯೋಗೇಶ ಕೆ.  ನೇತೃತ್ವದಲ್ಲಿ ಹೊನ್ನಾವರ ಪೊಲೀಸ್ ಠಾಣೆಯ ಪಿ.ಎಸ್.ಐ  ಮಂಜುನಾಥ, ರಾಜಶೇಖರ, ಶ್ರೀಮತಿ ಸಂಗೀತಾ, ಶ್ರೀಮತಿ ಮಮತಾ,  ಹಾಗೂ ಉಪವಿಭಾಗದ ಪಿ.ಎಸ್.ಐ ಗಳಾದ  ಭರತ,  ರವಿ ಗುಡಿ,  ಮಯೂರ,  ಶ್ರೀಕಾಂತ ರಾಠೋಡ,  ಖಾದರ ಪಾಷಾ ಇವರುಗಳನ್ನೊಳಗೊಂಡ ಮೂರು ತಂಡಗಳು ತುರ್ತು ಕಾರ್ಯಾಚರಣೆ ನಡೆಸಿ, ಸದರಿ ಪ್ರಕರಣದಲ್ಲಿ ಓರ್ವ ಆರೋಪಿತನನ್ನ ಬಂಧಿಸಲಾಗಿದೆ.

ಪ್ರಕರಣದ ಪ್ರಮುಖ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

ಇದನ್ನು ಓದಿ : ಹಿಚ್ಕಡ ಬಯಲು ರಂಗಮಂದಿರದ ಯಕ್ಷಪ್ರದರ್ಶನಕ್ಕೆ 50ರ ಸಂಭ್ರಮ; ಯಕ್ಷಪಟುಗಳಿಗೆ ಸನ್ಮಾನ

ಅಕ್ರಮವಾಗಿ ಸಾಗುವಾನಿ ದಾಸ್ತಾನು ಮಾಡುತ್ತಿದ್ದ ನಾಲ್ವರ ಬಂಧನ.

  ಮಹಾಸತಿಗೆ ಕೆಂಡದ ಭಕುತಿ ಪ್ರದರ್ಶಿಸಿದ ಭಕ್ತರು.

ವಿದ್ಯಾರ್ಥಿ ಬ್ಯಾಗ್ ನಲ್ಲಿ ದೇಶಿ ನಿರ್ಮಿತ ಬಾಂಬ್.

ಪ್ರಸಿದ್ಧ ಮಾಜಿ ಕ್ರಿಕೆಟಿಗನ ದಾಂಪತ್ಯದಲ್ಲಿ ಬಿರುಕ