ಬೆಂಗಳೂರು : ಬಿಜೆಪಿ ಹೈಕಮಾಂಡ್ ನಿಂದ ಮುನಿಸಿಕೊಂಡಿರುವ ಶಾಸಕರಾದ ಎಸ್ ಟಿ ಸೋಮಶೇಖರ್ ಮತ್ತು ಹಾಗೂ ಶಿವರಾಮ್ ಹೆಬ್ಬಾರ್  ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರ ಸದಾಶಿವನಗರದ ಮನೆಯಲ್ಲಿ  ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಬಿಜೆಪಿ ಶಾಸಕರ ಭೇಟಿ ಕುತೂಹಲ ಮೂಡಿಸಿದೆ.

ಈ ನಡುವೆ ಮಹಾರಾಷ್ಟ ಸಿಎಂ ಏಕನಾಥ ಸಿಂಧೆ ಹೇಳಿಕೆ ಬಗ್ಗೆ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆ ನಡೆದಿದೆ. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ರಾಜ್ಯದಲ್ಲೂ ನಾಥ ಸರ್ಕಾರದಂತೆ ಬಾರಿ ಬೆಳವಣಿಗೆ ನಡೆಯುತ್ತೆ ಎಂಬುದರ ಬಗ್ಗೆ  ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ.  ಇದಕ್ಕೆ ಪ್ರತಿಯಾಗಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ತಮ್ಮ ಸಂಪರ್ಕದಲ್ಲಿದ್ದರೆಂದು ಕಾಂಗ್ರೆಸ್ಸಿಗರು ಸ್ಪೋಟಕ ಮಾಹಿತಿ ಹೊರ ಹಾಕಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ  ಬಿಜೆಪಿ ಕಾರ್ಯಚಟುವಟಿಕೆಯಿಂದಲೇ ದೂರ ಉಳಿದಿದ್ದ ಶಾಸಕರಾದ ಎಸ್ ಟಿ ಸೋಮಶೇಖರ ಮತ್ತು ಶಿವರಾಮ್ ಹೆಬ್ಬಾರ್ ಕಾಂಗ್ರೆಸ್  ಬಾಗಿಲಲ್ಲಿ ನಿಂತಿದ್ದಾರೆ.  ರಾಜ್ಯ ಸಭಾ ಚುನಾವಣೆಯಲ್ಲಿಯೂ ಶಾಸಕ ಸೋಮಶೇಖರ್ ಅಡ್ಡಮತದಾನ ಮಾಡುವ ಮೂಲಕ ಪಕ್ಷದ ವಿರುದ್ಧ ಸಿಡಿದೆದ್ದರೇ ಶಿವರಾಮ್ ಹೆಬ್ಬಾರ್  ಮತದಾನದಿಂದ ದೂರವಿದ್ದರು.

ಲೋಕಸಭಾ ಚುನಾವಣೆ ವೇಳೆಯೂ ಇಬ್ಬರು ನಾಯಕರು ಬಿಜೆಪಿ ಪರ ಪ್ರಚಾರ ಕಾರ್ಯದಲ್ಲಿ ತೊಡಗದೇ ಸುಮ್ಮನಿದ್ದರು . ಇದೀಗ ಇಬ್ಬರು ಬಹಿರಂಗವಾಗಿಯೇ ಡಿ ಕೆ ಶಿವಕುಮಾರ್ ಸಂಪರ್ಕದಲ್ಲಿದ್ದಾರೆ. ಭೇಟಿ ಕೂಡ ಫಲಪ್ರದವಾಗಿದೆ ಎಂದು ಹೇಳಲಾಗಿದೆ.