ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಮಂಗಳೂರು(Mangaluru): ಕೇರಳದ(Keral) ಕಣ್ಣೂರು(Kannuru) ಜಿಲ್ಲೆಯ ಮಾಡಾಯಿಕಾವು ಭಗವತೀ ಕ್ಷೇತ್ರಕ್ಕೆ ಚಿತ್ರ ನಟ ದರ್ಶನ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಶತ್ರು ಸಂಹಾರ ಪೂಜೆಗೆ ಪ್ರಸಿದ್ಧಿಯಾದ ದೇವಸ್ಥಾನದಲ್ಲಿ ಭಗವತಿಗೆ ಅಸುರ ಕ್ರಿಯೆ ಮೂಲಕ ನಟ ದರ್ಶನ್ (Darshan) ತಮ್ಮ ಕುಟುಂಬದವರೊಂದಿಗೆ ಶತ್ರು ಸಂಹಾರ ಪೂಜೆ ನೆರವೇರಿಸಿದರು. ಪೂಜೆಯಲ್ಲಿ ದರ್ಶನ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಪಾಲ್ಗೊಂಡಿದ್ದರು.
ಕೇರಳದಲ್ಲಿ ಇರುವ ಹಲವು ಪ್ರಾಚೀನ ಹಾಗೂ ಐತಿಹಾಸಿಕ ಪುಣ್ಯಕ್ಷೇತ್ರಗಳಲ್ಲಿ ಮಾಡಾಯಿಕಾವು ದೇವಾಲಯ (Madayikavu Temple) ಒಂದಾಗಿದೆ. ದೇವಿಯ ಅವತಾರವಾದ ಭದ್ರಕಾಳಿ ಇಲ್ಲಿನ ಪ್ರಮುಖ ಆರಾಧ್ಯ ದೇವಿಯಾಗಿದ್ದು ಶತ್ರು ಸಂಹಾರ ಪೂಜೆಯು ಇಲ್ಲಿನ ವಿಶೇಷ. ಶತ್ರು ನಾಶ, ಕಷ್ಟ ನಿವಾರಣೆಗಾಗಿ ಶತ್ರು ಸಂಹಾರ ಪೂಜೆ ಮಾಡಲಾಗುತ್ತದೆ. ಕೇರಳ(Keral) ಹಾಗೂ ಮಂಗಳೂರು (Mangaluru) ಭಾಗದ ಭಕ್ತರು ಅತೀ ಹೆಚ್ಚಾಗಿ ಮಾಡಾಯಿ ಕಾವು ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಕರ್ನಾಟಕದ ರಾಜಕಾರಣಿಗಳೂ ಹಲವು ಸಂದರ್ಭದಲ್ಲಿ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ.
ಇದನ್ನು ಓದಿ : ಹುಲ್ಲಿನ ಬಣಿವೆಗೆ ಆಕಸ್ಮಿಕ ಬೆಂಕಿ. ಬಡ ರೈತನಿಗೆ ಲಕ್ಷಾಂತರ ರೂ ಹಾನಿ.
ರೈಲಿಗೆ ಸಿಲುಕಿ ಎಎಸ್ಐ ಪುತ್ರಿ ದುರಂತ ಅಂತ್ಯ
ಮಲ್ಪೆಯಲ್ಲಿ ಮೀನುಗಾರರ ಬೃಹತ್ ಪ್ರತಿಭಟನೆ. ಅಮಾಯಕ ಮಹಿಳೆಯರ ಬಿಡುಗಡೆಗೆ ಆಗ್ರಹ.