ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಮಂಗಳೂರು(Mangaluru): ಶ್ವಾನ ಕಡಿತಕ್ಕೊಳಗಾಗಿದ್ದ ಮಹಿಳೆಯೋರ್ವಳು ರೇಬಿಸ್ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ (Dakshinakannada) ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.
ಸಂಪಾಜೆಯ(Sampaje) ಕಲ್ಲುಗುಂಡಿ ಬಳಿಯ 42 ವರ್ಷದ ಮಹಿಳೆ ಸಾವನ್ನಪ್ಪಿದವರು. ಮಾರ್ಚ್ 7ರಂದು ಅರಂತೋಡಿನಲ್ಲಿ ತೋಟದ ಕೆಲಸಕ್ಕೆ ತೆರಳಿದ್ದ ಸಂದರ್ಭ ನಾಯಿ ಕಡಿದಿತ್ತು. ಕಡಿತದ ಬಗ್ಗೆ ನಿರ್ಲಕ್ಷ ವಹಿಸಿದ್ದ ಆಕೆ ಯಾರಿಗೂ ತಿಳಿಸದೆ ಚಿಕಿತ್ಸೆಯನ್ನೂ ಪಡೆಯದೆ ನಿರ್ಲಕ್ಷ ವಹಿಸಿದ್ದಳು ಎನ್ನಲಾಗಿದೆ.
ಸೋಮವಾರ ಮಹಿಳೆಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಸುಳ್ಯದ(Sulya) ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸಿದ್ದಳು. ಈ ವೇಳೆ ನೀರನ್ನು ನೋಡಿ ಬೊಬ್ಬೆ ಹಾಕುವುದು ಸಹಿತ ವಿಚಿತ್ರ ವರ್ತನೆ ತೋರುತ್ತಿದ್ದಳು. ವೈದ್ಯರು ತಪಾಸಣೆ ಮಾಡುವಾಗ ನಾಯಿ ಕಚ್ಚಿದ್ದ ಬಗ್ಗೆ ಮಾಹಿತಿ ನೀಡಿದ್ದಾಳೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ (Wenlack Hospital) ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮೃತಪಟ್ಟಿದ್ದಾಳೆ.
ಇದನ್ನು ಓದಿ : ಕುಟುಂಬ ಸಮೇತ ಶತ್ರು ಸಂಹಾರ ಪೂಜೆ ಸಲ್ಲಿಸಿದ ದರ್ಶನ್.
ಹುಲ್ಲಿನ ಬಣಿವೆಗೆ ಆಕಸ್ಮಿಕ ಬೆಂಕಿ. ಬಡ ರೈತನಿಗೆ ಲಕ್ಷಾಂತರ ರೂ ಹಾನಿ.
ರೈಲಿಗೆ ಸಿಲುಕಿ ಎಎಸ್ಐ ಪುತ್ರಿ ದುರಂತ ಅಂತ್ಯ
ಮಲ್ಪೆಯಲ್ಲಿ ಮೀನುಗಾರರ ಬೃಹತ್ ಪ್ರತಿಭಟನೆ. ಅಮಾಯಕ ಮಹಿಳೆಯರ ಬಿಡುಗಡೆಗೆ ಆಗ್ರಹ.