ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)  ಚಾಂಪಿಯನ್ಸ್ ಟ್ರೋಫಿ (Champions Trophy) ಫೈನಲ್ ಪಂದ್ಯದಲ್ಲಿ ಭಾರತ (Bharat) ತಂಡ ನ್ಯೂಜಿಲ್ಯಾಂಡ್(Newzeeland) ವಿರುದ್ಧ 4 ವಿಕೆಟ್ ಗಳಿಂದ  ರೋಚಕ ಜಯ ಗಳಿಸಿ ಚಾಂಪಿಯನ್ಸ್ ಟ್ರೋಫಿ ತನ್ನದಾಗಿಸಿಕೊಂಡಿದೆ.

ಉಭಯ ಬಲಿಷ್ಠ ತಂಡಗಳ ನಡುವಿನ ಸಮರದಲ್ಲಿ ಭಾರತ ಪಟ್ಟು ಬಿಡದೆ ಗೆಲುವು ತನ್ನದಾಗಿಸಿಕೊಳ್ಳುವ ಮುಲಕ ವಿಶ್ವದ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ  ನಿಜವಾಗಿಸುವಲ್ಲಿ ಯಶಸ್ವಿಯಾಗಿದೆ.

ಭಾನುವಾರ ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ 7 ವಿಕೆಟ್ ನಷ್ಟಕ್ಕೆ 251 ರನ್ ಕಲೆ ಹಾಕಿತು. ನಂತರ ಭಾರತ ತಂಡದ ನಾಯಕ ರೋಹಿತ್ ಶರ್ಮ ಮತ್ತು ಗಿಲ್ ಉತ್ತಮ ಆರಂಭಿಕ ಒದಗಿಸಿಕೊಟ್ಟು ಜತೆಯಾಟವಾಡಿ  105 ರನ್ ಗಳಿಸಿದರು. ಗಿಲ್ 31(50 ಎಸೆತ) ರನ್ ಗಳಿಸಿದ್ದ ವೇಳೆ ಔಟಾದರು. ಬೆನ್ನಲ್ಲೇ ಗ್ರೀಸ್ ಗಿಳಿದ ಕೊಹ್ಲಿ  ಒಂದು ರನ್ ಮಾಡುವಷ್ಟರಲ್ಲಿ ಎಲ್ ಬಿ ಡಬ್ಲ್ಯೂ ಗೆ ಔಟಾಗಿ ವಾಪಾಸ್ಸಾದರು. ಜವಾಬ್ದಾರಿಯುತ ಆಟವಾಡಿದ ರೋಹಿತ್ 76 ರನ್ ಗಳಿಸಿದ್ದ ವೇಳೆ ಮುನ್ನುಗ್ಗಿ ಹೊಡೆಯಲು ಹೋಗಿ ಸ್ಟಂಪ್ ಔಟಾದರು. ಆ ಬಳಿಕ ತಂಡಕ್ಕೆ ಆಧಾರವಾದ ಶ್ರೇಯಸ್ ಅಯ್ಯರ್ 48 ರನ್ ಗಳಿಸಿದ್ದ ವೇಳೆ ಪೆವಿಲಿಯನ್ ಗೆ ವಾಪಾಸ್ ಆದರು.

ಅಕ್ಷ‌ರ್ ಪಟೇಲ್ 29, ಶ್ರೇಯಸ್ ಅಯ್ಯರ್ 48 ರನ್,  ಪಾಂಡ್ಯ 18 ರನ್ ಗಳಿಸಿ ಔಟಾದರು. ಸಮಯೋಚಿತ ಆಟವಾಡಿದ ಕೆ.ಎಲ್. ರಾಹುಲ್ ಔಟಾಗದೆ 34 ರನ್ ಗಳಿಸಿ ಗೆಲುವಿನ ದಡ ಸೇರಿಸಿದರು. ರೋಚಕ ಸಮರದಲ್ಲಿ 49 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿ ಗೆಲುವು ತರುವಲ್ಲಿ  ಯಶಸ್ವಿಯಾದರು.

ಭಾರತ್ ಚಾಂಪಿಯನ್ ಟ್ರೋಫಿ ಮೂಡಿಗೆರಿಸಿಕೊಂಡ ಹಿನ್ನಲೆಯಲ್ಲಿ ದೇಶಾದ್ಯಂತ ವಿಜಯೋತ್ಸವ ಆಚರಿಸಲಾಯಿತು. ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕ್ರಿಕೆಟ್ ಅಭಿಮಾನಿಗಳು ಸಂಶುದ್ದಿನ್ ಸರ್ಕಲ್ ಗೆ ಬಂದು ವಿಜಯೋತ್ಸವ ಆಚರಿಸಿದರು. ಯುವಕರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಇದನ್ನು ಓದಿ : ಕಣ ಕಣದಲ್ಲಿ ಕೇಸರಿ. ಮೂವರು ನಟರಿಗೆ ಸಂಕಷ್ಟರೀ.