ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi):  ಬ್ಯಾಂಕಿಗೆ ಭರಣ ಮಾಡಬೇಕಿದ್ದ  ಸಂಸ್ಥೆಯ ಸ್ವ-ಸಹಾಯ ಸಂಘ ಹಾಗೂ ಜಂಟಿ ಬಾಧ್ಯತಾ ಗುಂಪುಗಳ ಮಹಿಳೆಯರ ಸಾಲದ ಕಂತುಗಳನ್ನು ಲಪಟಾಯಿಸಿ ಮಹಿಳೆಯರಿಗೆ ಮೋಸ ಮಾಡಿರುವ ಸಿಬ್ಬಂದಿ ಸೇರಿ ಮೂವರ ಮೇಲೆ  ಪೊಲೀಸ್ ಠಾಣೆಯಲ್ಲಿ ಪ್ರಕರಣ(Police Station Complaint) ದಾಖಲಿಸಲಾಗಿದೆ.

ಶಿರಸಿಯ ಸ್ಕೊಡ್‌ವೆಸ್ (Sirsi Scodwes) ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಹೊಸ ಮಾರುಕಟ್ಟೆ ಪೋಲೀಸ್ ಠಾಣೆಯಲ್ಲಿ (New Market Police Station) ಕ್ರಿಮಿನಲ್ ದೂರು ದಾಖಲಿಸಿದ್ದಾರೆ.

ಸಂಸ್ಥೆಯ ಸ್ವ-ಸಹಾಯ ಸಂಘಗಳು ಹಾಗೂ ಜಂಟಿ ಬಾಧ್ಯತಾ ಗುಂಪುಗಳ ಮಹಿಳೆಯರ ಆರ್ಥಿಕ ಬಲವರ್ಧನೆಗೆ ಬ್ಯಾಂಕುಗಳಿಂದ ಕೊಡಿಸಲಾಗಿದ್ದ ಸಾಲವನ್ನು ಮರುಪಾವತಿ ಮಾಡಿಸುವ ಜವಾಬ್ದಾರಿಯನ್ನು ಸ್ಕೊಡ್‌ವೆಸ್ ಸಂಸ್ಥೆಯ(Scodwes Samsthe) ಸಿಬ್ಬಂದಿ ನಾಗರತ್ನಾ ಪ್ರಭಾಕರ ಗೌಡ (ಮರಾಠಿ) ಇವರಿಗೆ ವಹಿಸಲಾಗಿತ್ತು. ಆದರೆ ನಾಗರತ್ನಾ  ನಿಯಮಾನುಸಾರ ಸಾಲದ ಕಂತುಗಳನ್ನು ಬ್ಯಾಂಕಿಗೆ ಭರಣ ಮಾಡುವ ಬದಲು ಪೋರ್ಜರಿ ದಾಖಲೆ ಸೃಷ್ಟಿಸಿ ಸುಮಾರು  9,98,797 ರೂಪಾಯಿ ಹಣವನ್ನು ತನ್ನ ಗಂಡ ಪ್ರಭಾಕರ ಪುಟ್ಟ ಗೌಡ ಹಾಗೂ ತಮ್ಮ ಸತೀಶ ಕೆ. ಮರಾಠಿಯವರೊಂದಿಗೆ ಸೇರಿಕೊಂಡು ಲಪಟಾಯಿಸಿದ್ದಾರೆ ಎಂದು  ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿ ನಾಗರತ್ನಾ ಪ್ರಭಾಕರ ಗೌಡ (ಮರಾಠಿ) ರವರನ್ನು ಕಛೇರಿಗೆ ಕರೆಸಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ನಾಗರತ್ನಾ ಪ್ರಭಾಕರ ಗೌಡ (ಮರಾಠಿ) ಹಾಗೂ ಗಂಡ ಪ್ರಭಾಕರ ಪುಟ್ಟ ಗೌಡ ಹಾಗೂ ತಮ್ಮ ಸತೀಶ ಕೆ. ಮರಾಠಿ ಸ್ವತಃ ಆಗಮಿಸಿ ಇವರು ತಪ್ಪೊಪ್ಪಿಗೆ ಹೇಳಿಕೆ ನೀಡಿ ಲಪಟಾಯಿಸಿದ ಹಣವನ್ನು 12.12.2024 ರ ಒಳಗಾಗಿ ಭರಿಸುವುದಾಗಿ ಲಿಖಿತ ಹೇಳಿಕೆ ನೀಡಿದ್ದರು. ಹಣ ಭರಣ ಮಾಡಲು ನೀಡಿದ ಅವಧಿಯ ನಂತರ ಸ್ಕೊಡ್‌ಸ್ ಸಂಸ್ಥೆಯ ಪ್ರತಿನಿಧಿಗಳು ದುರ್ಬಳಕೆ ಮಾಡಿದ ಹಣವನ್ನು ಬ್ಯಾಂಕಿಗೆ ಭರಿಸುವಂತೆ ಕೇಳಲು ಹೋದ ಸಂದರ್ಭದಲ್ಲಿ ನಾಗರತ್ನಾ ಪ್ರಭಾಕರ ಗೌಡ (ಮರಾಠಿ) ಇವಳು ಸಂಸ್ಥೆಯ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆಯನ್ನು ಹಾಕಿದ್ದಳು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಬಗ್ಗೆ ದೂರು ದಾಖಲಿಸಿಕೊಂಡ ಹೊಸ ಮಾರುಕಟ್ಟೆ ಪೋಲೀಸ್ ಠಾಣಾ ಉಪ ನಿರೀಕ್ಷಕಿ ಶ್ರೀಮತಿ ರತ್ನಾ ಕುರಿ ಆರೋಪಿಗಳ ಶೋಧ ಕಾರ್ಯ ನಡೆಸಿದ್ದಾರೆ.
ಇದನ್ನು ಓದಿ : ಅತ್ತೆ ಸಾಯಿಸಲು ಮಾತ್ರೆ ಹೇಳಿ. ವೈದ್ಯರ ಬಳಿ ಸಲಹೆ ಕೇಳಿದ ಸೊಸೆ.

ಮುಡಾ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆ.  ಸಿಎಂ ಮತ್ತು ಪತ್ನಿ ಬಚಾವ್.

ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಡಿಕ್ಕಿ ಹೊಡೆದ ಲಾರಿ. ಮೂವರ ದುರ್ಮರಣ

ಪ್ರೇಮಿಗಳಿಗೆ ನಿವೇದಿಸಿ ನೇಣಿಗೆ ಕೊರಳೊಡ್ಡಿದ ಯುವಕ. ಅಂಕೋಲಾದಲ್ಲೊಂದು ಹೃದಯವಿದ್ರಾವಕ ಘಟನೆ.

ಭಟ್ಕಳದಲ್ಲಿ ಮೂವರು ಯುವಕರಿಂದ ಓರ್ವನ ಮೇಲೆ ಚಾಕುವಿನಿಂದ ಹಲ್