ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar): ಜಿಲ್ಲಾಸ್ಪತ್ರೆಯಲ್ಲಿ ತುರ್ತು(Emergency) ಚಿಕಿತ್ಸೆಗಾಗಿ ವ್ಯಕ್ತಿಯೋರ್ವನನ್ನ ಕರೆತಂದ ಸಂದರ್ಭದಲ್ಲಿ ಅಪರಿಚಿತರ ಗುಂಪು ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳ ಮೇಲೆ ಹಲ್ಲೆ(Assalt) ನಡೆಸಿದ ಆರೋಪ ಕೇಳಿಬಂದಿದೆ.  ಈ ಸಂಬಂಧ ಆಸ್ಪತ್ರೆಯ ಗುತ್ತಿಗೆ ನೌಕರರು ಕೆಲ ಕಾಲ ಕೆಲಸಕ್ಕೆ ಬಹಿಷ್ಕಾರ ಹಾಕಿದ ಘಟನೆ ನಡೆದಿದೆ.

ಬುಧವಾರ ರಾತ್ರಿ ತುರ್ತು ಚಿಕಿತ್ಸೆಗೋಸ್ಕರ ಕೆಲವರು ಜಿಲ್ಲಾಸ್ಪತ್ರೆಗೆ ವ್ಯಕ್ತಿಯೋರ್ವನನ್ನ ಕರೆತಂದಿದ್ದರು. ಆ ರೋಗಿಯ ಸಿಟಿ ಸ್ಕಾನ್(Cityscan) ಮಾಡಿಸಿ ಬಳಿಕ ಕ್ಯಾಸಲ್ಟಿ ಬಳಿ ರೋಗಿ ಸ್ಟ್ರೈಚರ್ ಮೇಲೆ ಇದ್ದಾಗ ಕೊಂಚ ಜಾರಿದ್ದಾನೆಂದು ಹೇಳಲಾಗುತ್ತಿದೆ. ಇದರಿಂದ ಕೋಪಗೊಂಡ ಅಪರಿಚಿತರು ಸಿಬ್ಬಂದಿಗಳಾದ ಪ್ರವೀಣ್, ಪ್ರಶಾಂತ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಕರ್ತವ್ಯದಲ್ಲಿದ್ದ ವೈದ್ಯರ ಮೇಲೂ ಕೈ ಮಾಡಿದಾರೆನ್ನಲಾಗಿದೆ.

ಹೀಗಾಗಿ ಗುರುವಾರ ಬೆಳಿಗ್ಗೆ ಆಸ್ಪತ್ರೆ ಎದುರು ಆಸ್ಪತ್ರೆಯ ಗುತ್ತಿಗೆ ನೌಕರರು ಕೆಲಸಕ್ಕೆ ಬಹಿಷ್ಕಾರ ಹಾಕಿದರು. ಹಲ್ಲೆ ನಡೆಸಿದ ಆರೋಪಿಗಳನ್ನ ಬಂಧಿಸುವಂತೆ ಒತ್ತಾಯಿಸಿದರು. ತಮಗೆ ರಕ್ಷಣೆ ನೀಡಬೇಕೆಂದರು.

ಈ ಸಂಬಂಧ ಜಿಲ್ಲಾಸ್ಪತ್ರೆಯ ಹಿರಿಯ ಅಧಿಕಾರಿಗಳು ಸಭೆ ನಡೆಸಿದರು. ಘಟನೆಗೆ ಸಂಬಂಧಿಸಿ ಆಸ್ಪತ್ರೆಯಿಂದ ಠಾಣೆಯಲ್ಲಿ ದೂರು ನೀಡುವುದಾಗಿ ಕ್ರಿಮ್ಸ್ ನಿರ್ದೇಶಕಿ ಪೂರ್ಣಿಮಾ(Krims Director Poornima) ಹೇಳಿದ್ದಾರೆ. ಸಿಬ್ಬಂದಿಗಳಿಗೆ ರಕ್ಷಣೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಬಳಿಕ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾದರು.

ಇದನ್ನು ಓದಿ : ಸಂಸ್ಥೆಯ ಹಣ ದುರ್ಬಳಕೆ. ಸಿಬ್ಬಂದಿ ಮೇಲೆ ಕ್ರಿಮಿನಲ್ ದೂರು ದಾಖಲಿಸಿದ ಡಾ. ವೆಂಕಟೇಶ ನಾಯ್ಕ.

ಅತ್ತೆ ಸಾಯಿಸಲು ಮಾತ್ರೆ ಹೇಳಿ. ವೈದ್ಯರ ಬಳಿ ಸಲಹೆ ಕೇಳಿದ ಸೊಸೆ.

ಮುಡಾ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆ.  ಸಿಎಂ ಮತ್ತು ಪತ್ನಿ ಬಚಾವ್.

ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಡಿಕ್ಕಿ ಹೊಡೆದ ಲಾರಿ. ಮೂವರ ದುರ್ಮರಣ

ಪ್ರೇಮಿಗಳಿಗೆ ನಿವೇದಿಸಿ ನೇಣಿಗೆ ಕೊರಳೊಡ್ಡಿದ ಯುವಕ. ಅಂಕೋಲಾದಲ್ಲೊಂದು ಹೃದಯವಿದ್ರಾವಕ ಘಟನೆ.