ಶಿರಸಿ:  ಬಾರೀ ಹಿಮಪಾತದಿಂದ ಉತ್ತರಖಂಡದಲ್ಲಿ ಹಲವು ಚಾರಣಿಗರು ನಾಪತ್ತೆಯಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ ಶಿರಸಿಯ ಜಾಗನಹಳ್ಳಿಯ ಯುವತಿಯೋರ್ವರು ಸಾವಪ್ಪಿರುವ ಶಂಕೆ ವ್ಯಕ್ತವಾಗಿದೆ.

35 ವರ್ಷದ ಪದ್ಮಿನಿ ಹೆಗಡೆ ಟ್ರೆಕ್ಕಿಂಗ್‌ ಗೈಡ್‌ಗಳಾಗಿ ಉತ್ತರ ಕಾಶಿಯ ಮೂವರು ನಿವಾಸಿಗಳ ಜತೆ ತೆರಳಿದ್ದರು. ಬೆಂಗಳೂರಿನಿಂದ 18 ಜನರು , ಪುಣೆಯಿಂದ ಒಬ್ಬರು ಹೀಗೆ ಹಲವರು ತೆರಳಿದ್ದರು.  ಗೂಗಲ್ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದ ಪದ್ಮನಿ ಹೆಗಡೆ   ಚಾರಣದಲ್ಲಿ ಆಸಕ್ತಿ ಹೊಂದಿ ದ್ದರಿಂದ ಹೋಗಿದ್ದರೆನ್ನಲಾಗಿದೆ. ಕಳೆದ ಮೇ 29ರಿಂದ ಜೂನ್ 7ರವರೆಗೆ ಭಟವಾಡಿ ಮಲ್ಲಾ – ಸಿಲ್ಲಾ ಕುಶಕಲ್ಯಾಣ ಸಹಸ್ರತಾಲ್ ಟ್ರೆಕ್ಕಿಂಗ್‌ಗೆ ಅನುಮತಿ ಪಡೆದ ತಂಡದೊಂದಿಗೆ ಪದ್ಮನಿ ಅವರು ತೆರಳಿದ್ದರು.

ಜೂನ್ ನಾಲ್ಕರಂದು ಮಧ್ಯಾಹ್ನದ ವೇಳೆಗೆ ಹವಾಮಾನ ಸರಿಯಿಲ್ಲ ಎಂದು  ಪದ್ಮಿನಿ ತಮ್ಮ ತಾಯಿಗೆ ಮೆಸೆಜ್ ಮುಲಕ ತಿಳಿಸಿದ್ದರು. ಪದ್ಮಿನಿ  ತಾಯಿ ಶೈಲಾ ಹೆಗಡೆ ಅವರು ಮುಂಬೈನಲ್ಲಿ ತಮ್ಮ ಮೊದಲ ಮಗಳ ಜತೆ ವಾಸವಾಗಿದ್ದಾರೆ. ಸದ್ಯ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ಘಟನೆ ಬಗ್ಗೆ ಖಚಿತಪಡಿಸಿದ್ದು ಪದ್ಮಿನಿಯವರು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದಿದ್ದಾರಂತೆ.