ಕುಮಟಾ : ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಕಂಟೆನರ್ ವಾಹನದ ಮೇಲೆ  ದಾಳಿ ಮಾಡಿದ ಪೊಲೀಸರು 21 ಜಾನುವಾರುಗಳನ್ನ ರಕ್ಷಣೆ ಮಾಡಿದ್ದಾರೆ.

ಕಂಟೇನರ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನ ಭಟ್ಕಳ ಕಡೆಗೆ ಸಾಗಿಸಲಾಗುತಿತ್ತು. ಕುಮಟಾ ಹೊಳೆಗದ್ದೆ ಟೋಲ್ ನಾಕಾ ಬಳಿ  ಪೊಲೀಸರು ವಾಹನ ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಓರ್ವನನ್ನ ಬಂಧಿಸಿದ್ದಾರೆ.

ಜಾನುವಾರುಗಳನ್ನು ಹಿಂಸಾತ್ಮಕವಾಗಿ, ಕಾನೂನು ನಿಯಮ ಮೀರಿ ಸಾಗಾಟ ಮಾಡಲಾಗುತಿತ್ತು.  ಕೇರಳ ಮೂಲದ ಜೈನುದ್ದೀನ್ ಜಕ್ರಿಯಾ ಎಂಬತಾನೆ ಬಂಧಿತ ಆರೋಪಿಯಾಗಿದ್ದು  ಇನ್ನೂ ಮೂವರು ತಲೆಮರೆಸಿಕೊಂಡಿದ್ದಾರೆ.

ಪ್ರಕರಣದಲ್ಲಿ ಲಾರಿ ಸಮೇತ 8.40 ಲಕ್ಷ ರು. ಮೌಲ್ಯದ 21 ಜಾನುವಾರುಗಳು ವಶಕ್ಕೆ ಪಡೆಯಲಾಗಿದ್ದು  ಕುಮಟಾ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.