ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news)ನವದೆಹಲಿ (Newdelhi): ಭಾರತ ಮತ್ತು ಪಾಕಿಸ್ತಾನ(India and Pakistan) ನಡುವಿನ ಸಂಘರ್ಷ ಹೆಚ್ಚುತ್ತಿರುವ ಕಾರಣ, ಬಿಸಿಸಿಐ(BCCI) ಐಪಿಎಲ್(IPL) ಅನ್ನು ಮುಂದೂಡಿದ್ದು ಹೊಸ ದಿನಾಂಕಗಳನ್ನು ಘೋಷಿಸಿಲ್ಲ.

ಇನ್ನೂ 12 ಲೀಗ್ ಪಂದ್ಯಗಳು ಬಾಕಿ ಇವೆ. ಪಂದ್ಯಾವಳಿಯ ಫೈನಲ್ ಪಂದ್ಯ ಮೇ 25 ರಂದು ನಡೆಯಬೇಕಿತ್ತು. ಬಿಸಿಸಿಐ(BCCI) ಮೂಲವನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ಈ ಮಾಹಿತಿಯನ್ನು ನೀಡಿದೆ. “ದೇಶದಲ್ಲಿ ಯುದ್ಧ ನಡೆಯುತ್ತಿರುವಾಗ ಕ್ರಿಕೆಟ್ ನಡೆಯುತ್ತಿರುವುದು ಒಳ್ಳೆಯದಲ್ಲ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಮೇ 8 ರ ರಾತ್ರಿ ಸುಮಾರು 8.30 ರ ಸುಮಾರಿಗೆ ಪಾಕಿಸ್ತಾನವು ಭಾರತದ ಜಮ್ಮು, ಪಂಜಾಬ್ ಮತ್ತು ರಾಜಸ್ಥಾನ ಗಡಿಗಳ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿ ಮಾಡಿತು. ಈ ಸಮಯದಲ್ಲಿ, ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್(Panjab Kings) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ನಡುವೆ ಪಂದ್ಯ ನಡೆಯುತ್ತಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 10.1 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತು. ನಂತರ ಮೈದಾನದ ಹೊನಲು ದೀಪಗಳನ್ನು ಆಫ್ ಮಾಡಿ ಪ್ರೇಕ್ಷಕರನ್ನು ಮನೆಗೆ ಕಳುಹಿಸಲಾಯಿತು. ಯುದ್ಧದ ಪರಿಸ್ಥಿತಿಯಿಂದಾಗಿ, ನಗರದಲ್ಲಿ ವಿದ್ಯುತ್ ಕಡಿತಗೊಳಿಸಿ ಪಂದ್ಯವನ್ನು ರದ್ದುಗೊಳಿಸಲಾಯಿತು. ಇದು ಲೀಗ್ ಹಂತದ 58ನೇ ಪಂದ್ಯವಾಗಿತ್ತು.

ಪಂದ್ಯದಲ್ಲಿ ಗುಜರಾತ್ ಅಗ್ರಸ್ಥಾನದಲ್ಲಿದ್ದರೆ, ಮೂರು  ತಂಡಗಳು ಹೊರಬಿದ್ದಿವೆ. ಐಪಿಎಲ್ ಅರ್ಧಕ್ಕೆ ನಿಲ್ಲುವ ಹೊತ್ತಿಗೆ, ಲೀಗ್ ಹಂತದ 57 ಪಂದ್ಯಗಳು ಪೂರ್ಣಗೊಂಡಿದ್ದವು. 58ನೇ ಪಂದ್ಯವನ್ನು ಅರ್ಧದಲ್ಲೇ ನಿಲ್ಲಿಸಲಾಯಿತು. 57 ಪಂದ್ಯಗಳ ನಂತರ, ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು 16-16 ಅಂಕಗಳಿಂದ ಪಾಯಿಂಟ್ ಪಟ್ಟಿಯಲ್ಲಿ ಅತ್ಯಧಿಕ ಅಂಕಗಳನ್ನು ಹೊಂದಿವೆ. ಉತ್ತಮ ರನ್ ದರದಿಂದಾಗಿ ಜಿಟಿ ಅಗ್ರಸ್ಥಾನದಲ್ಲಿ ಉಳಿಯಿತು. ಪಂಜಾಬ್ ಮೂರನೇ, ಮುಂಬೈ ನಾಲ್ಕನೇ ಮತ್ತು ದೆಹಲಿ ಐದನೇ ಸ್ಥಾನದಲ್ಲಿವೆ. ಆದರೆ ಚೆನ್ನೈ, ರಾಜಸ್ಥಾನ ಮತ್ತು ಹೈದರಾಬಾದ್ ತಂಡಗಳು ಪ್ಲೇಆಫ್ ರೇಸ್‌ನಿಂದ ಹೊರಬಿದ್ದವು.

ಇದನ್ನು ಓದಿ : ಐಎನ್ಎಸ್ ವಿಕ್ರಾಂತ ಆರ್ಭಟ. ಕರಾಚಿ ಬಂದರು ಸಂಪೂರ್ಣ ನಾಶ.

ಕಾರವಾರದ ಆರು ಸ್ಥಳಗಳಲ್ಲಿ ಮೇ 12 ರಂದು  ಅಣುಕು ಕಾರ್ಯಾಚರಣೆ : ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ.

ಆಣೆಕಟ್ಟುಗಳಿಗೆ ಭದ್ರತೆ ಕಲ್ಪಿಸಲು ಸರ್ಕಾರ ಆದೇಶ.