ಭಟ್ಕಳ : ತಾಲೂಕಿನ ವಿವಿದೆಡೆ ಮಂಗಳವಾರ ಸಂಜೆ ವರುಣ ಆರ್ಭಟಿಸಿದ್ದಾನೆ. ಬಾರೀ ಮಳೆಯಿಂದಾಗಿ ಕೆಲ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ.
ಭಟ್ಕಳ ನಗರದ ಹನುಮಾನ್ ನಗರ, ಮಗ್ದುಮ್ ಕಾಲೋನಿ ಭಾಗದಲ್ಲಿ ಮಳೆ ನೀರು ಮುಂದಕ್ಕೆ ಹೋಗಲಾರದೆ ಮನೆಯೊಳಗೆ ನುಗ್ಗಿದೆ. ಹನುಮಾನ ನಗರದ ದಿಗಂಬರ್ ಶೇಟ್ ಎಂಬುವವರ ಮನೆಗೆ ಮಳೆ ನೀರು ನುಗ್ಗಿದರಿಂದ ಮನೆಯವರು ತೊಂದರೆ ಅನುಭವಿಸಿದರು.
ಮನೆಯಲ್ಲಿರುವ ವಸ್ತುಗಳೆಲ್ಲ ನೀರುಪಾಲಾಗಿದ್ದು ನೀರನ್ನ ಹೊರಹಾಕಲು ಹರಸಾಹಸ ಪಡಬೇಕಾಯಿತು. ಬಳಿಕ ಮಳೆ ನಿಂತಿದ್ದರಿಂದ ಜನತೆ ನಿಟ್ಟುಸಿರು ಪಡಬೇಕಾಯಿತು.