ಕಾರವಾರ : ಬೇಡಿಕೆ ಈಡೇರಿಕೆಗಾಗಿ ಪಂಚಮಶಾಲಿ ಲಿಂಗಾಯತ ಸಮುದಾಯದಿಂದ ಮತ್ತೆ ಹೋರಾಟ ತೀವೃಗೊಳ್ಳಲಿದೆ ಎಂದು ಕೂಡಲಸಂಗಮದ ಪಂಚಮಶಾಲಿ ಗುರುಪೀಠಧ್ಯಾಕ್ಷರಾದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದಾರೆ.

ಕಾರವಾರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೋರಾಟದ ರೂಪುರೇಷೆ ಸಿದ್ದಪಡಿಸಲು ಮೇ 23ರಂದು ಬಸವಣ್ಣನ ಐಕ್ಯ ಸ್ಥಳ  ಉಳವಿಯಲ್ಲಿ ಪಂಚಮಶಾಲಿ ಸಮುದಾಯದ ಪದಾಧಿಕಾರಿಗಳ ಸಂಕಲ್ಪ ಸಭೆ ಆಯೋಜಿಸಲಾಗಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವ ರೀತಿ ಹೋರಾಟ ನಡೆದಿತ್ತೋ ಅದೇ ರೀತಿಯಾಗಿ  ಹೋರಾಟ ರೂಪಿಸಲು ಪ್ಲ್ಯಾನ್ ಮಾಡಲಾಗಿದೆ. ಹೋರಾಟದ ಫಲವಾಗಿ ಪಂಚಮಶಾಲಿ ಲಿಂಗಾಯತ ಸಮುದಾಯವನ್ನ 2 ಡಿಗೆ ಸೇರಿಸಲಾಗಿತ್ತು. ಆದ್ರೆ ಇದರಿಂದ ಪ್ರಯೋಜನವಿಲ್ಲ ಎಂದರಿತ ಸಮುದಾಯದ ನಾಗರಿಕರು 2 ಎ ಮೀಸಲಾತಿಗಾಗಿ ಕಳೆದ ಡಿಸೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಕಾನೂನು ತಜ್ನರ ಸಭೆ ಕರೆಯುವುದಾಗಿ ತಿಳಿಸಿದ್ದರು. ಆದರೆ ಕರೆಯಲಿಲ್ಲ. ಹೀಗಾಗಿ ಸಮುದಾಯದ ನಾಗರಿಕರಿಗೆ ಅಸಮಧಾನ, ಬೇಸರವಿದೆ ಎಂದ ಸ್ವಾಮೀಜಿ , ಸರ್ಕಾರ ಆದಷ್ಟು ಬೇಗ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವಲ್ಲಿ ಲಿಂಗಾಯತರ ಪಾತ್ರ ಬಹಳವಿದೆ. ಗೆದ್ದ ಶಾಸಕರು ಅಧಿವೇಶನದಲ್ಲಿ ಪಕ್ಷಾತೀತವಾಗಿ ಮಾತನಾಡಬೇಕೆಂದು ಸಲಹೆ ನೀಡಿದ ಸ್ವಾಮೀಜಿ  ಮುಖ್ಯಮಂತ್ರಿಗಳು ಸಂವಿಧಾನ ಓದಿದವರು. ಶಾಸಕರು ಮುಕ್ತವಾಗಿ ಮಾತಾಡಲಿ ಸಮಾಜದ ಋಣತೀರಿಸುವ ಕೆಲಸ ಮಾಡಿ ಎಂದು ಶಾಸಕರಿಗೆ ಸಲಹೆ ನೀಡಿದ್ದಾರೆ. ಬರುವ ಮಳೆಗಾಲದ ಅಧಿವೇಶನದಲ್ಲಿ ಚರ್ಚೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.